July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ: ಪೆರಿಂಜೆ ಮಲಿಯಾಳ ಪಲ್ಕೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹೊಸಂಗಡಿ : ಪೆರಿಂಜೆ ಮಲಿಯಾಳ ಪಲ್ಕೆ ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ನಡೆದ್ದಿದ್ದು ಈ ಬಗ್ಗೆ ಫೆ.29ರಂದು ವರದಿಯಾಗಿದೆ.

ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಪೆರಿಂಜೆ ಮಲಿಯಾಳ ಪಲ್ಕೆ ಎಂಬಲ್ಲಿ ಆರಂಬೋಡಿ – ಪಡ್ಯಾರಬೆಟ್ಟು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬೊಳ್ಳಾಜೆ ಎಂಬಲ್ಲಿಂದ ಶಾಂತಿಕಾಡು ಕಡೆಗೆ ವಸಂತರವರು ಸಹಸವಾರರಾಗಿ ಸವಾರಿ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನ ನಂ: ಕೆಎ 19 ಹೆಚ್‌ ಎನ್‌ 0984 ನೇದನ್ನು ಆರೋಪಿತ ಸವಾರ ಎಡ್ವರ್ಡ್‌ ಎಂಬವರು ಇಳಿಜಾರು ಹಾಗೂ ಕಿರಿದಾದ ಪ್ರದೇಶದಲ್ಲಿ ಎದುರಿನಿಂದ ಅಂದರೆ ಪಡ್ಯಾರಬೆಟ್ಟು ಕಡೆಯಿಂದ ಬರುತ್ತಿದ್ದ ಟಿಪ್ಪರ್‌ ಲಾರಿಯನ್ನು ಕಂಡು ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ ದ್ವಿಚಕ್ರ ವಾಹನವು ಡಾಮಾರು ರಸ್ತೆಯ ಅಂಚಿನಲ್ಲಿ ಅಂದರೆ ತಗ್ಗು(ಗುಂಡಿ) ಪ್ರದೇಶದಲ್ಲಿ ಚಲಾಯಿಸಿದಾಗ ಸಹಸವಾರರಾಗಿ ಕುಳಿತಿದ್ದ ವಸಂತರವರ ಹಿಡಿತ ತಪ್ಪಿ ದ್ವಿಚಕ್ರ ವಾಹನದಿಂದ ರಸ್ತೆಗೆ ಕುಸಿದು ಬಿದ್ದು, ಬೆನ್ನಿಗೆ ಗುದ್ದಿದ ಪರಿಣಾಮ ತೀವ್ರ ನೋವುಂಟಾದವರನ್ನು ಆರೋಪಿ ಸವಾರ ಹಾಗೂ ಇತರರು ಸೇರಿ ಖಾಸಗಿ ವಾಹನದಲ್ಲಿ ಕಾರ್ಕಳದ ಸ್ಪಂದನಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Related posts

ಉಜಿರೆ: ಎಸ್.ಡಿ.ಎಂ.ವಸತಿ ಪದವಿ ಪೂರ್ವ ಕಾಲೇಜು ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’

Suddi Udaya

ಪ್ರಾಮಾಣಿಕ ಜನಸೇವೆಗಾಗಿ ಸಹಕಾರ ಸಂಘಗಳು ಕಟಿಬದ್ದರಾಗಬೇಕು; ಬೆಳ್ತಂಗಡಿ ತಾಲೂಕು ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ ಕರೆ

Suddi Udaya

ಬೆಳ್ತಂಗಡಿ : ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲೂಕು ಸಮಿತಿ ಸಮಾಲೋಚನಾ ಸಭೆ

Suddi Udaya

ಕಾಶಿಪಟ್ಣ : ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಗೋವು

Suddi Udaya

ಅಳದಂಗಡಿ ಸೊಸೈಟಿಯಿಂದ ಸಂಘ ಸಂಸ್ಥೆಗಳಿಗೆ ದೇಣಿಗೆ ಹಸ್ತಾಂತರ

Suddi Udaya

ಬಳಂಜ: ವೇಣೂರು ಆರಕ್ಷಕ ಠಾಣೆಯ ವತಿಯಿಂದ ಬೀಟ್ ಪೋಲೀಸ್ ಪಂಪಾಪತಿಯವರಿಂದ ಸಾರ್ವಜನಿಕರಿಗೆ ಸೈಬರ್ ಕ್ರೈಂ ,ಸಂಚಾರ ನಿಯಮ ಪಾಲನೆ ಹಾಗೂ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ

Suddi Udaya
error: Content is protected !!