ಬೆಳ್ತಂಗಡಿ : ಬಿಜೆಪಿ ಮಂಡಲದ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ 2024ರ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆಯು ಮಾ.1 ರಂದು ನಡೆದಿದೆ.

ಬೆಳ್ತಂಗಡಿ ನಗರದ ಅಧ್ಯಕ್ಷರಾಗಿ ರಾಜೇಶ್ ಪ್ರಭು, ಪ್ರ.ಕಾರ್ಯದರ್ಶಿಯಾಗಿ ಶರತ್, ನಾರಾವಿ ಅಧ್ಯಕ್ಷರಾಗಿ ನೇಮಯ್ಯ ಕುಲಾಲ್, ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಜೈನ್, ಅಳದಂಗಡಿ ಅಧ್ಯಕ್ಷರಾಗಿ ವಿಶ್ವನಾಥ ಹೊಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಮಾಧವ ಶಿರ್ಲಾಲು, ಕುವೆಟ್ಟು ಅಧ್ಯಕ್ಷರಾಗಿ ಚಂದ್ರಕಾಂತ ಗೌಡ, ಪ್ರ.ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ, ಕಣಿಯೂರು ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ, ಪ್ರ,ಕಾರ್ಯದರ್ಶಿಯಾಗಿ ಮಹೇಶ್ ಜೇಂಕ್ಯಾರು, ಧರ್ಮಸ್ಥಳ ಅಧ್ಯಕ್ಷರಾಗಿ ಹರೀಶ್ ಕಳೆಂಜ, ಪ್ರ,ಕಾರ್ಯದರ್ಶಿಯಾಗಿ ಗಣೇಶ್ ಹತ್ಯಡ್ಕ, ಉಜಿರೆ ಅಧ್ಯಕ್ಷರಾಗಿ ಯಶವಂತ ಪುದುವೆಟ್ಟು, ಪ್ರ.ಕಾರ್ಯದರ್ಶಿಯಾಗಿ ಪ್ರದೀಪ್ ಉಜಿರೆ, ಲಾಯಿಲ ಅಧ್ಯಕ್ಷರಾಗಿ ಪ್ರಕಾಶ್ ಜೈನ್, ಪ್ರ.ಕಾರ್ಯದರ್ಶಿಯಾಗಿ ಅರವಿಂದ ಲಾಯಿಲ ಆಯ್ಕೆಯಾಗಿದ್ದಾರೆ.

Leave a Comment

error: Content is protected !!