ನೂರುಲ್ ಹುಧಾ ದರ್ಸ್ ವಾರ್ಷಿಕ ಹಾಗೂ ಬುರ್ದಾ ಮಜಲಿಸ್ ಸಮಾರಂಭದಲ್ಲಿ ಭೂನ್ಯಾಯ ಮಂಡಳಿಗೆ ನಾಮ ನಿರ್ದೇಶನ ಹೊಂದಿದ ಇಸ್ಮಾಯಿಲ್ ಕೆ ಪೆರಿಂಜೆ ರವರಿಗೆ ಗೌರವಾರ್ಪಣೆ

Suddi Udaya

ವೇಣೂರು : ಇಲ್ಲಿನ ಉಳ್ತುರು ಜುಮ್ಮಾ ಮಸೀದಿಯಲ್ಲಿ ಸಯ್ಯದ್ ಅಬ್ದುಲ್ ರಹಿಮಾನ್ ಸಾದಾತ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ನಡೆದ ನೂರುಲ್ ಹುಧಾ ದರ್ಸ್ ವಾರ್ಷಿಕ ಹಾಗೂ ಬುರ್ದಾ ಮಜಲಿಸ್ ಸಮಾರಂಭದಲ್ಲಿ, ಇತ್ತೀಚೆಗೆ ಬೆಳ್ತಂಗಡಿ ತಾಲೂಕು ಭೂನ್ಯಾಯ ಮಂಡಳಿಗೆ ಕರ್ನಾಟಕ ಸರಕಾರದಿಂದ ನಾಮ ನಿರ್ದೇಶನ ಹೊಂದಿದ ಪಡ್ಡಂದಡ್ಕ ನೂರುಲ್ ಹುಧಾ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆಯವರನ್ನು ಗೌರವಿಸಲಾಯಿತು.

ಉಳ್ತೂರು ಜುಮ್ಮಾ ಮಸೀದಿ ಮುದರೀಸ್ ಪಾಲಾಲಿಲ್ ಕಾಮಿಲ್ ಸಖಾಫಿ ಅಲ್ ಆರ್ಷದಿ ಪುರ್ಕಾನಿ ಮುದರ್ರಿಸ್ ಅಭಿನಂದನಾ ಭಾಷಣ ಮಾಡಿದರು. ಸಯ್ಯದ್ ತಾಹ ತಂಗಳ್ ಮಲಪುರಂ ಗೌರವಿಸಿದರು. ಸಭೆಯಲ್ಲಿ ಹಲವಾರು ಪ್ರದೇಶದ ಧರ್ಮಗುರುಗಳು, ಮಸೀದಿ ಅಧ್ಯಕ್ಷ ಅಬ್ಬಾಸ್ ಸಯ್ಯದ್ ಹಸನ್ ,ಎಚ್ ಮಹಮ್ಮದ್ ವೇಣೂರು ,ಅಶ್ರಫ್ ಶಾಂತಿನಗರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Leave a Comment

error: Content is protected !!