ಪಟ್ರಮೆ: ಮುಂಡೂರುಪಳಿಕೆ ಸುಗ್ಗಿ ಪುರುಷರ ಕೂಟದ ಸಭೆಯು ಮಾ.3 ರಂದು ನಡೆಯಿತು.
ಸಭೆಯಲ್ಲಿ 2024ನೇ ಸಾಲಿನ ಪುರುಷರ ಕೂಟದ ನೂತನ ಅಧ್ಯಕ್ಷರಾಗಿ ಕೊಕ್ಕಡ ಗ್ರಾಮ ಪಂಚಾಯತ್ ನ ಸದಸ್ಯ ವಿಶ್ವನಾಥ ಕಕ್ಕುದೋಳಿ, ಕಾರ್ಯದರ್ಶಿಯಾಗಿ ಊರಿನ ಸಾಮಾಜಿಕ ಧಾರ್ಮಿಕ ಕಾರ್ಯಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸಿ ಸಲಹೆ ನೀಡುತ್ತಾ ತನ್ನನ್ನು ತಾನು ತೊಡಗಿಸಿಕೊಂಡಿರುವ ನಾರಾಯಣ ಗೌಡ ತೆಂಕುಬೈಲು ಇವರು ಆಯ್ಕೆಯಾಗಿದ್ದಾರೆ.
ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ವರ್ಷದ ಸುಗ್ಗಿ ಪುರುಷರ ಕೂಟದ ಸೇವೆಯು ಮಾ.19, 20, 21 ರಂದು ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.