25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದ.ಕ ಜಿಲ್ಲೆಗೆ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳು ಶೇ.50, 90ರ ಸಹಾಯಧನ ಲಭ್ಯ: ವಿವಿಧ ಬಗೆಯ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ

ಬೆಳ್ತಂಗಡಿ: ದ.ಕ ಜಿಲ್ಲೆಗೆ ಕೃಷಿ ಇಲಾಖೆಯಿಂದ ಶೇ.90 ಮತ್ತು ಶೇ 50ರ ಸಹಾಯಧನದಲ್ಲಿ ವಿವಿಧ ಬಗೆಯ ಯಂತ್ರೋಪಕರಣಗಳ (Agriculture machinery) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ರೈತರು ತಮಗೆ ಅವಶ್ಯವಿರುವ ಯಂತ್ರೋಪಕರಣಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳಬಹುದು.

ಸಬ್ಸಿಡಿ ವಿವರ: ಎಲ್ಲಾ ವರ್ಗದ ರೈತರು SMAM ಯೋಜನೆಯಡಿ (Agriculture machoaery susbsidy yojana), ಪಡೆಯಲು ಈ ಕೆಳಗಿನ ಉಪಕರಣಗಳನ್ನು ಸಾಮಾನ್ಯ ರೈತರು ಶೇ.50ರ ಸಬ್ಸಿಡಿ ಪಡೆಯಬಹುದು. ಪ.ಜಾತಿ, ಪ.ಪಂಗಡದ ರೈತರಿಗೆ ಶೇ.90 ರವರೆಗೆ (ಕೆಲವು ಮಿತಿಗೊಳಪಟ್ಟು )ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು.

ಸಬ್ಸಿಡಿಯಲ್ಲಿ ದೊರೆಯುವ ಯಂತ್ರೋಪಕರಣಗಳು:

  • ಕಳೆ ಕತ್ತರಿಸುವ ಯಂತ್ರ
  • ಅಗೆತ ಮಾಡುವ ಯಂತ್ರ / ರೋಟರಿ ಪವರ್ವೀಡರ್
  • ಮೇವು ಕತ್ತರಿಸುವ ಯಂತ್ರ
  • ಔಷಧಿ ಸಿಂಪಡಣೆಗೆ HTP spryayers
  • ಪವರ್ ಟಿಲ್ಲರ್
  • ಟ್ರಾಕ್ಟರ್
  • ಟ್ರಾಕ್ಟರ್ ಉಪಕರಣಗಳು
  • ಯಂತ್ರ ಚಾಲಿತ ಕೈಗಾಡಿ(Load cart )

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು: ಅರ್ಜಿದಾರರ ಪೋಟೋ ., ಆಧಾ‌ರ್ ಕಾರ್ಡ್‌ಪ್ರತಿ, ಹಿಡುವಳಿ ಪ್ರಮಾಣ ಪತ್ರ .(RTC) ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡದ ರೈತರಿಗೆ ಮಾತ್ರ ), ಖಾತಾ ಪ್ರತಿ, ಬ್ಯಾಂಕ್‌ ಪಾಸ್‌ಬುಕ್ ಜೆರಾಕ್ಸ್ ಪ್ರತಿ

ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿ ಇಕೋ ಪ್ರೆಸ್ ಎಂಟರ್ ಪ್ರೈಸಸ್ ಹಾಗೂ ಪುತ್ತೂರು ಇಕೋ ಪ್ರೆಸ್ ಎಂಟರ್ ಪ್ರೈಸಸ್ ಪ್ರತಿ ನಿಧಿ ಅಥವಾ ಮೊಬೈಲ್ 8618010550 / 9113959854 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಮೇ 28: ಕೊಕ್ಕಡದಲ್ಲಿ ಜೇಸಿ ವಲಯ 15 ರ ವಲಯಾಡಳಿತ ಸಭೆ

Suddi Udaya

ಮೂಡುಬಿದಿರೆ: ವೈಬ್ರೆಂಟ್ ವಿದ್ಯಾರ್ಥಿಗಳಿಗೆ ವಿಜೃಂಭಣೆಯ ಲಾಂಗ್ ಟರ್ಮ್ ಡೇ

Suddi Udaya

ಅಕ್ಷರ ಕಲಿಸುವ ವಿದ್ಯಾ ದೇಗುಲಕ್ಕೆ ಖದೀಮರ ಕನ್ನ, ಕಣಿಯೂರಿನ ಪಿಲಿಗೂಡು ಶಾಲೆ ಬೀಗ ಒಡೆದು‌ ಕಳ್ಳತನ:

Suddi Udaya

ಚಾರ್ಮಾಡಿ ಮೃತ್ಯುಂಜಯ ನದಿ ಕಿನಾರೆಯಲ್ಲಿ ದನದ ತ್ಯಾಜ್ಯ ಎಸೆದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Suddi Udaya

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯ ನವೀಕರಿಸಿದ ಶಾಲಾ ಕಟ್ಟಡ ಹಸ್ತಾಂತರ

Suddi Udaya
error: Content is protected !!