ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಅಯೋಧ್ಯೆ ಯಾತ್ರೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದಿಂದ ಪದಾಧಿಕಾರಿಗಳು ಮತ್ತು ಸದಸ್ಯರು ಮಂಗಳೂರಿನಿಂದ ಅಯೋಧ್ಯೆ ರಾಮಮಂದಿರಕ್ಕೆ ವಿಶೇಷ ರೈಲಿನ ಮೂಲಕ ಮಾ.6ರಂದು ಪ್ರಯಾಣ ಬೆಳೆಸಿದರು.

ತಂಡದ ಸಂಚಾಲಕ ಗಣೇಶ್ ನಾವೂರು ಇವರ ನೇತೃತ್ವದಲ್ಲಿ ಆಹಾರ ವಿಭಾಗದ ಪ್ರಮುಖ್ ಮಂಡಲದ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಸವಣಾಲು., ವಸತಿ ವಿಭಾಗದ ಪ್ರಮುಖ್ ತಣ್ಣೀರುಪಂತ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹೇಶ್ ಜೆಂಕ್ಯಾರು, ದರ್ಶನ ವಿಭಾಗದ ಪ್ರಮುಖ್ ನವೀನ್ ನಿಡ್ಲೆ, ನೋಂದಾವಣಿ ವಿಭಾಗದ ಪ್ರಮುಖ್ ಬಾಲಕೃಷ್ಣ ಬೆಳಾಲು, ಮಾಜಿ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಮಾಜಿ ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ್ ರವರನ್ನು ಒಳಗೊಂಡ 52 ಜನರ ತಂಡ ಮಂಗಳೂರಿನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.

ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರರವರು ಯಾತ್ರಾರ್ಥಿಗಳ ಪ್ರಯಾಣಕ್ಕೆ ಶುಭಕೋರಿದರು. ಈ ವೇಳೆ ಯಾತ್ರಾ ಸಂಪರ್ಕ ಪ್ರಮುಖ್ ಸೀತಾರಾಮ ಬೆಳಾಲು ಜೊತೆಗಿದ್ದರು.

Leave a Comment

error: Content is protected !!