ಸಮಾಜ ಸೇವಕ ಕೇಶವ ಫಡಕೆಯವರಿಗೆ ಸನ್ಮಾನ

Suddi Udaya


ಮಿತ್ತಬಾಗಿಲು: ಸರಕಾರಿ ಪ್ರೌಢ ಶಾಲೆ ಮಿತ್ತಬಾಗಿಲುನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭದಲ್ಲಿ ಸಮಾಜ ಸೇವಕ ಕೇಶವ ಫಡಕೆ ಇವರನ್ನು ಗೌರವಿಸಲಾಯಿತು.


ಅಧ್ಯಕ್ಷತೆಯನ್ನು ಗೋಪಾಲ್ ಅವರು ವಹಿಸಿದ್ದರು. ಉಪಾಧ್ಯಕ್ಷ ಚಂದ್ರಶೇಖರ್, ಮುಖ್ಯ ಅತಿಥಿಗಳಾಗಿ ವರ್ಗಾವಣೆಗೊಂಡ ಶಿಕ್ಷಕರಾದ ವಿರೂಪಾಕ್ಷಪ್ಪ, ರಮೇಶ್ ಗೌಡ, ಸಂದೀಪ್ ಕರಾಟೆ ಶಿಕ್ಷಕರು ಭಾಗವಹಿಸಿದ್ದರು. ಸಹ ಶಿಕ್ಷಕರಾದ ಮಂಜುನಾಥ ಹೆಚ್.ಜಿ, ಅತಿಥಿ ಶಿಕ್ಷಕರಾದ ಸುಹಾಸಿನಿ, ಕುಮಾರಿ ರಶ್ಮಿತಾ ಉಪಸ್ಥಿತರಿದ್ದರು.
ಶ್ರೀಮತಿ ಪುಷ್ಪಲತಾ ಬಿ. ಸ್ವಾಗತಿಸಿದರು. ಮೋಹನ್ ಎಂ.ಕೆ ನಿರೂಪಿಸಿ, ಮಂಜುಳ ಧನ್ಯವಾದವಿತ್ತರು.

Leave a Comment

error: Content is protected !!