July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ನಾವರ ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ

ನಾವರ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಮಾ.10 ರಂದು ಚಪ್ಪರ ಮುಹೂರ್ತ ನಡೆಯಿತು.

ಅಳದಂಗಡಿ ಶ್ರೀ ಕ್ಲಿನಿಕ್ ವೈದ್ಯರಾದ ಡಾ.ಎನ್.ಎಂ ತುಳಪುಳೆ ಚಪ್ಪರ ಮುಹೂರ್ತ ನೆರವೇರಿಸಿ ಮಾತಾನಾಡಿ ನಾವರ ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆದು ಎಲ್ಲಾ ಭಕ್ತ ವೃಂದದವರನ್ನು ಸೆಳೆಯುವಂತಾಗಲಿ. ಅದರಂತೆ ಯಶಸ್ವಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿಕೊಂಡು ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಕೆಲಸ ಕಾರ್ಯಗಳಿಗೆ ರೂ.52,000 ಮೊತ್ತದ ದೇಣಿಗೆಯನ್ನು ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಬೊನ್ನಿಜೆ ರವಿರಾಜ ಹೆಗ್ಡೆ ವಹಿಸಿದ್ದರು.ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ನಿತ್ಯಾನಂದ ನಾವರ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲ್ವಿಚಾರಕರಾದ ಸುಮಂಗಲ, ವ್ಯವಸ್ಥಾಪನಾ ಸಮಿತಿ ಸದಸ್ಯ ಸದಾನಂದ ಎಂ, ಚಪ್ಪರ ಸಮಿತಿ ಸಂಚಾಲಕ ಸಂತೋಷ ಕುಲಾಲ್, ಉಪಸ್ಥಿತರಿದ್ದರು.ಜಗದೀಶ್ ಹೆಗ್ಡೆ ನಾವರಗುತ್ತು, ನಿತ್ಯಾನಂದ ಶೆಟ್ಟಿ ನೊಚ್ಚ, ಸಾಂಸ್ಕೃತಿಕ ಸಮಿತಿ ಸಂಚಾಲಕ ವೀರೇಂದ್ರ ಕುಮಾರ್ ರಾಜಪಾದೆ, ಕುದ್ಯಾಡಿ ಸಂಚಾಲಕ ಸದಾನಂದ ಬಿ, ಸ್ವಚ್ಚತಾ ಸಮಿತಿ ಸಂಚಾಲಕ ಯಶೋಧರ ಸುವರ್ಣ ಬಿಕ್ಕಿರ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ರಾವ್, ರವಿಚಂದ್ರ ಭಟ್, ರವಿ ಪೂಜಾರಿ ಹಾರಡ್ಡೆ, ಗಿರಿಜಾ ಅಶೋಕ ನಗರ, ಅಭಿವೃದ್ಧಿ ಸಮಿತಿ ಕೋಶಾಧಿಕಾರಿ ಜಯಾನಂದ ಕೊರಲ್ಲ, ಯೋಜನೆಯ ಸೇವಾಪ್ರತಿನಿಧಿ ಪುಷ್ಪಾವತಿ ನಾವರ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ರಾವ್, ರವಿಚಂದ್ರ ಭಟ್, ರವಿ ಪೂಜಾರಿ ಹಾರಡ್ಡೆ, ಗಿರಿಜಾ ಅಶೋಕ ನಗರಯೋಜನೆಯ ಸೇವಾಪ್ರತಿನಿಧಿ ಪುಷ್ಪಾವತಿ ನಾವರ, ಪ್ರಗತಿ ಬಂಧು ಒಕ್ಕೂಟದ ದೇಜಪ್ಪ ದೇವಾಡಿಗ, ಚಂದಪ್ಪ ಪೂಜಾರಿ, ಪ್ರಶಾಂತ ಶೆಟ್ಟಿ ಬಿಕ್ಕಿರ, ಲಕ್ಷ್ಮಣ ಕುಲಾಲ್, ರವಿಕೋಟ್ಯಾನ್ , ರಮಾನಾಥ ಪಾದೆಮಾರಡ್ಡ, ರತ್ನಾಕರ ನಾವರ, ಕಿರಣ್ ಕಲ್ಲಾಪು, ರತ್ನಾಕರ ಹಿರಂತೊಟ್ಟು, ನಾರಾಯಣ ಪೂಜಾರಿ ಕೊಟಾಡಿ, ಕೃಷ್ಣಪ್ಪ ಕುಲಾಲ್, ಸ್ವಯಂ ಸೇವಕ ಸಮಿತಿ ಸಂಚಾಲಕ ಸುದರ್ಶನ ಹಾಗೂ ಯುವಶಕ್ತಿ , ಶಿವನಾಗ, ಸದ್ಧರ್ಮ ಸಂಘಗಳ ಸದಸ್ಯರು ಭಾಗವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ.ಹೆಚ್ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ ವಂದಿಸಿದರು.

Related posts

ಜೂ.30ರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಅಭಿಯಾನ ಆರಂಭ

Suddi Udaya

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ಇನ್ನು 24 x 7 ವಿಶೇಷ ಪರಿಣತಿ ಹೊಂದಿದ  ಮೂಳೆ ತಜ್ಞರು ಲಭ್ಯ

Suddi Udaya

ಶಿಬಾಜೆ ಗ್ರಾ.ಪಂನಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ವಿಶೇಷ ಗ್ರಾಮ ಸಭೆ

Suddi Udaya

ವೇಣೂರು : ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರಿಗೆ ಗೌರವಾರ್ಪಣೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ನಾರಾವಿ ಸಿಎ ಬ್ಯಾಂಕಿಗೆ ಸತತ 5 ವರ್ಷದಿಂದ ಸಾಧನಾ ಪ್ರಶಸ್ತಿ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉದ್ಯಮಿ, ಸಾಧಕರಾದ ಮೋಹನ್ ಕುಮಾರ್ ರವರಿಗೆ ಮಡಂತ್ಯಾರು ಜೇಸಿ ವರ್ಷದ ಅತ್ಯುತ್ತಮ ಪ್ರಶಸ್ತಿ

Suddi Udaya
error: Content is protected !!