ಬೆಳ್ತಂಗಡಿ:ಹಿರಿಯ ಸಾಹಿತಿ ಪತ್ರಕರ್ತ ಉಜಿರೆ ಶ್ರೀಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ನಾಗರಾಜ ಪೂವಣಿ (86) ಮಾ 11 ರಂದು ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ನಾ.ವುಜಿರೆ ಎಂದೇ ಪ್ರಸಿದ್ಧರಾದ ಇವರು ಸಾಹಿತಿಯಾಗಿ, ಪತ್ರಕತ೯ರಾಗಿ ಜನಪ್ರಿಯರಾಗಿದ್ದರು.
ಇವರು ಉಜಿರೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತಿದ್ದರು.
ನಾ ಉಜಿರೆ ಅವರ ಪುತ್ರ ಪಾರ್ಶ್ವನಾಥ ಅವರು ಅಮೇರಿಕಾ ದಿoದ ಬುಧವಾರ ಬೆಳಿಗ್ಗೆ ಬಂದು ನಂತರ ಅಂತ್ಯಕ್ರಿಯೆ ನಡೆಯಲಿದೆ.
ಮೃತರು ಪತ್ನಿ ಶ್ರೀಮತಿ ಸರಸ್ವತಿ ನಾ ಉಜಿರೆ ಹಾಗೂ ಕುಟುಂಬ ವರ್ಗ ದವರನ್ನು ಅಗಲಿದ್ದಾರೆ.











