July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ದ.ಕ. ಜಿಲ್ಲೆಯ ಹೆಚ್ಚಿನ ರೈತರಿಗೆ ಬೆಳೆ ಸಾಲ ಯೋಜನೆಯ ಸೌಲಭ್ಯ ತಲುಪುವಲ್ಲಿ ವಿಫಲ:ಅಗತ್ಯವಿರುವ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ಅವರಿಗೆ ಆಗ್ರಹ

ಬೆಳ್ತಂಗಡಿ: ರೈತರಿಗೆ ಸಹಕಾರ ಸಂಘಗಳ ಮೂಲಕ ನೀಡುವ ಬೆಳೆ ಸಾಲವನ್ನು ರೂ. 3 ಲಕ್ಷ ದಿಂದ 5 ಲಕ್ಷ ರೂ.ವರೆಗೆ ಏರಿಸಲಾಗಿದ್ದರೂ ದ.ಕ. ಜಿಲ್ಲೆಯ ಹೆಚ್ಚಿನ ರೈತರಿಗೆ ಈ ಯೋಜನೆಯ ಸೌಲಭ್ಯ ತಲುಪುವಲ್ಲಿ ವಿಫಲವಾಗಿದೆ. ಇದಕ್ಕಾಗಿ ಅಗತ್ಯವಿರುವ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಯೋಜನೆಯ ಬಗ್ಗೆ ಸೆ. 12 ರಂದು ಸಹಕಾರ ಇಲಾಖೆ ಮೂಲಕ ಆದೇಶ ಮಾಡಲಾಗಿದೆ. ಆದರೆ ಈ ಸಾಲ ನೀಡಲು ಅಗತ್ಯವಿರುವ ನಿಧಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಇದರಿಂದ ಹೆಚ್ಚಿಸಿರುವ ಸಾಲದ ಮೊತ್ತವನ್ನು ಸಹಕಾರ ಸಂಘಗಳು ಸ್ವಂತ ನಿಧಿಯಿಂದ ನೀಡಬೆಕಾಗಿದೆ. ಸಾವಿರಾರು ಸದಸ್ಯರಿಗೆ ಸ್ವಂತ ನಿಧಿಯಿಂದ ಸಾಲ ನೀಡಿದರೆ ಅದು ಸಹಕಾರ ಸಂಘಗಳ ವ್ಯವಹಾರದ ಮೇಲೆ ವ್ಯತರಿಕ್ತ ಪರಿಣಾಮ ಬೀರಲಿದೆ. ಈ ಕಾರಣದಿಂದ ಸಹಕಾರ ಸಂಘಗಳು ಹೆಚ್ಚಿನ ಸಾಲದ ಪ್ರಮಾಣದ ಮೊತ್ತವನ್ನು ರೈತರಿಗೆ ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದ ಸರಕಾರ ಯೋಜನೆ ಘೋಷಿಸಿದ್ದರೂ ಇದು ಜಿಲ್ಲೆಯ ಮಟ್ಟಿಗೆ ಫಲಾನುಭವಿಗಳನ್ನು ತಲುಪದ ಯೋಜನೆಯಾಗಿ ಮುಂದುವರಿದಿದೆ. ಹೀಗಾಗಿ ಇದಕ್ಕೆ ಬೇಕಾಗುವ ನಿಧಿಯನ್ನು ಕೂಡಲೆ ಬಿಡುಗಡೆಗೊಳಿಸಿ ರೈತರರಿಗೆ ನೆರವಾಗಬೇಕೆಂದು ಮಾ.7 ರಂದು ಅವರು ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Related posts

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳಿಗಾಗಿ ರೊಬೋಟ್ “ಶ್ರುತಿ” ಜೊತೆಗೆ ವಿಶೇಷ ಸಂವಹನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಶಾಸಕ ಹರೀಶ್ ಪೂಂಜರ ಹುಟ್ಟು ಹಬ್ಬದ ಪ್ರಯುಕ್ತ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಬಂದಾರು-ಕೊಕ್ಕಡ ಗ್ರಾಮವನ್ನು ಬೆಸೆಯುವ ಮೈಪಾಲ ಸೇತುವೆ ಕಾಮಗಾರಿ ವೀಕ್ಷಿಸಿದ ಶಾಸಕ ಹರೀಶ್ ಪೂಂಜ

Suddi Udaya

ಉಪ್ಪಿನಂಗಡಿ: 70 ಅಡಿ ಆಳದ ಹೊಂಡಕ್ಕೆ ಬಿದ್ದ ಕಾರು; ಪಟ್ಟೂರು ಶಿಕ್ಷಣ ಸಂಸ್ಥೆಯ ಸಂಚಾಲಕ ಸೇರಿ ಇಬ್ಬರು ಪಾರು

Suddi Udaya

ಕೊಕ್ಕಡ: ಹೊಸೊಕ್ಲುವಿನಲ್ಲಿ ಬೃಹತ್ ಗಾತ್ರದ ಶಂಖಪಾಲ ಹಾವು ಪತ್ತೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ: ಹೆತ್ತವರ ಪೋಷಕರ/ಮಹಾಸಭೆ

Suddi Udaya
error: Content is protected !!