25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

ಉಜಿರೆ: ಯುವ ಪ್ರತಿಭಾನ್ವಿತರ ಕಲಾತ್ಮಕ ಅಭಿವ್ಯಕ್ತಿಗೆ ವೇದಿಕೆ ಒದಗಿಸಿಕೊಡುವ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಪ್ರಸಕ್ತ ವರ್ಷದ ಝೇಂಕಾರದ ಐದನೇ ಆವೃತ್ತಿಯ ಸಾಂಸ್ಕೃತಿಕ ಉತ್ಸವ ಮಾ.14-15 ರಂದು ನಡೆಯಲಿದೆ. ಈ ಸಲದ ಪ್ರಮುಖ ಆಕರ್ಷಣೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಗಮನ ಸೆಳೆಯಲಿದ್ದಾರೆ.

ಪ್ರತಿವರ್ಷವೂ ಆಯೋಜಿತವಾಗುವ ಝೇಂಕಾರ ಸ್ಟಾರ್ ನೈಟ್‌ಗೆ ಖ್ಯಾತ ಜನಪ್ರಿಯ ನಟರು ಆಗಮಿಸುತ್ತಾರೆ. ಬೆಳೆಗಿನ ಅವಧಿಯಲ್ಲಿ ಉತ್ಸವಕ್ಕೆ ಚಾಲನೆ ನೀಡಿದ ನಂತರ ವಿವಿಧ ಸ್ಪರ್ಧೆಗಳು ಎರಡು ದಿನಗಳ ಕಾಲ ಆಯೋಜಿತವಾಗಲಿವೆ. ಆರಂಭದ ದಿನ ಸಂಜೆ ನಡೆಯುವ ಸ್ಟಾರ್‌ನೈಟ್ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ನಡೆಸಿಕೊಡಲಿದ್ದಾರೆ.

ಮಾಕ್ ಪ್ರೆಸ್, ಪ್ರೊ ಪ್ರೆಸೆಂಟರ್, ಕಲರ್ ಫುಲ್ ಕ್ಯಾನವಾಸ್ ಶೀರ್ಷಿಕೆಯ ವೈಯುಕ್ತಿಕ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಗ್ರುಪ್ ಇವೆಂಟ್ ವಿಭಾಗದಲ್ಲಿ ಸಮೂಹ ನೃತ್ಯ, ಫ್ಯಾಷನ್ ಪರೇಡ್, ರಸಪ್ರಶ್ನೆ, ಔಟ್ ಡೋರ್ ಇವೆಂಟ್ ವಿಭಾಗದಲ್ಲಿ ಗಲ್ಲಿ ಕ್ರಿಕೆಟ್ ಪಂದ್ಯಾವಳಿ, ಸ್ಪಾಟ್ ಇವೆಂಟ್ ವಿಭಾಗದಲ್ಲಿ ರೀಲ್ ಮೇಕಿಂಗ್, ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಗಳು ಏರ್ಪಡಲಿವೆ.

ರಾಜ್ಯದ ವಿವಿಧೆಡೆಗಳಿಂದ 40ಕ್ಕೂ ಹೆಚ್ಚು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾಲ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಅಂಗಳ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಭಾನ್ವಿತ ಯುವ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣದ ವೇದಿಕೆಯಾಗಿ ಕಂಗೊಳಿಸಲಿದೆ. ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳು ಒಂದು ಲಕ್ಷ ರೂ. ಮೌಲ್ಯದ ವಿವಿಧ ಬಹುಮಾನಗಳನ್ನು ಪಡೆಯಲಿದ್ದಾರೆ.

Related posts

ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳಿಗೆ “ISO ಪ್ರಮಾಣೀಕರಣ” ಕುರಿತು ತರಬೇತಿ ಕಾರ್ಯಾಗಾರ

Suddi Udaya

ಪುಂಜಾಲಕಟ್ಟೆ- ಪುರಿಯ ಹದಗೆಟ್ಟ ರಸ್ತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭೇಟಿ

Suddi Udaya

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಕೊಲ್ಲೂರಿನಿಂದ-ನಾಡಿನ ಪ್ರಸಿದ್ದ ಶ್ರದ್ದಾಕೇಂದ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ಯಾತ್ರೆ: ಉಜಿರೆಯಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆಗೆ ಅದ್ದೂರಿ ಚಾಲನೆ,

Suddi Udaya

ವೇಣೂರು ಸಿಎ ಬ್ಯಾಂಕ್ ನ ಮಾಜಿ ನಿರ್ದೇಶಕ ರತ್ನವರ್ಮ ಮುದ್ಯ ನಿಧನ

Suddi Udaya

ಪುಂಜಾಲಕಟ್ಟೆ: ವ್ಯಕ್ತಿತ್ವ ವಿಕಸನ ಮತ್ತು ಸಮಯ ನಿರ್ವಹಣೆಯ ಬಗ್ಗೆ ಕಾರ್ಯಾಗಾರ

Suddi Udaya
error: Content is protected !!