26.7 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅನಾಥರಾಗಿ ತಿರುಗಿಡುತ್ತಿದ್ದ ವಯೋವೃದ್ಧ ತಂದೆಯನ್ನು ಮಗನ ಜವಾಬ್ದಾರಿ ಗೆ ವಹಿಸಿದ ವೇಣೂರು ಪೋಲೀಸರು

ಬೆಳ್ತಂಗಡಿ : ಮಾ.13ರಂದು ರಾತ್ರಿ 12 ಗಂಟೆಗೆ ನಾಲ್ಕೂರು ಗ್ರಾಮದ ಆಸುಪಾಸಿನಲ್ಲಿ ಜನ ನಿಬಿಡ ಪ್ರದೇಶದಲ್ಲಿ ವಯೋವೃದ್ಧ ರೋರ್ವರು ಅನಾಥರಾಗಿ ಹಸಿವಿನಿಂದ ನರಳುತಿದ್ದು ಸ್ಥಳೀಯ ಬಳಂಜ ಪಂಚಾಯತ್ ಸದಸ್ಯ ರವೀಂದ್ರ ಅಮೀನ್ ಬಳಗದವರು ಪೋಲೀಸ್ ರ ಸಹಾಯದಿಂದ ಅವರನ್ನು ಗುಂಡೂರಿಯ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ತಾತ್ಕಾಲಿಕ ನೆಲೆಗೆ ವ್ಯವಸ್ಥೆ ಮಾಡಿದರು.

ಪೋಲಿಸರು ಈ ವಯೋವೃದ್ಧರ ಮಕ್ಕಳನ್ನು ಸಂಪರ್ಕಿಸಿ, ಮಾ.14ರಂದು ಇಂದು ವೇಣೂರು ಪೋಲೀಸ್ ಠಾಣೆಗೆ ಬಂದ ಮಗನಿಗೆ ಪೊಲೀಸರು ಬುದ್ಧಿವಾದ ಹೇಳಿ ಈ ವಯೋ ವೃದ್ಧ ತಂದೆಯನ್ನು ಮಗನ ಜತೆ ಕಳುಹಿಸಲಾಯಿತು.

ಕಿವಿ ಕೇಳದ ಈ ವಯೋವೃದ್ಧರಲ್ಲಿ ಸರಿಯಾದ ಮಾಹಿತಿ ತಿಳಿಯಲು ಹರಸಾಹಸ ಪಡೆಯಲಾಯಿತು.ಈ ಮೂಲಕ ಪೋಲೀಸರು ಮಗನ ಸಂಪರ್ಕ ವನ್ನು ಸಾಧಿಸಿ ಪೋಲೀಸ್ ಠಾಣೆಗೆ ಕರೆಯಿಸಿ ಸಾವ೯ಜನಿಕರ ಮೆಚ್ಚುಗೆಗೆ ಪಾತ್ರರಾದರು.

ವಯೋವೃದ್ಧ ಉಡುಪಿಯ ಶಂಕರನಾರಾಯಣ ಪೋಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು. ವಯೋ ಸಹಜ ಡಿಮೆನ್ಸಿಯಾ ರೋಗದಿಂದ ಬಳಲು ತಿದ್ದುರು. ಮನೆಯಲ್ಲಿ ನಿಲ್ಲದೆ ಊರೂರು ತಿರುಗುವ ಚಾಳಿ ಇದ್ದು.ಮರಗುಳಿತನವೂ ಇದೆ.

ಮಗನಿಗೆ ತಂದೆಯ ಹಸ್ತಾಂತರ ದ ಸಮಯ ರವೀಂದ್ರ ಅಮೀನ್ ಮತ್ತು ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಉಪಸ್ಥಿತರಿದ್ದರು.

Related posts

ಜಿಪಿಟಿ ಶಿಕ್ಷಕ ಮೋಹನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಪೆರಿಂಜೆಯಿಂದ ನಡ್ತಿಕಲ್ಲುವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಆರೋಗ್ಯ ಮಾಹಿತಿ ಹಾಗೂ ತಪಾಸಣೆ

Suddi Udaya

ಕರಾಟೆ ಚಾಂಪಿಯನ್ ಶಿಪ್ : ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಸೌತಡ್ಕ ಶ್ರೀ ಮಹಾ ಗಣಪತಿ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ ಭೇಟಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರ್ಜುನ್ ಜನ್ಯ ದಂಪತಿ ಭೇಟಿ

Suddi Udaya
error: Content is protected !!