24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ: ಮನೆಗೆ ನುಗ್ಗಿದ್ದ ಕಳ್ಳರು : ಸುಮಾರು ರೂ.46450 ಮೌಲ್ಯದ ಸೊತ್ತುಗಳು ಕಳವು

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಸುಬರ್ನಿ ರವರ ಮನೆಯಲ್ಲಿ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿ ಯಾರೋ ಕಳ್ಳರು ಒಳಗೆ ನುಗ್ಗಿ ಸುಮಾರು ರೂ.46450 ಮೌಲ್ಯ ದ ಸೊತ್ತುಗಳನ್ನು ಕಳವುಗೈದ ಘಟನೆ ನಡೆದಿದೆ.

ಕಳಿಯ ಗ್ರಾಮದ ಸುಬರ್ನಿ ಬಿರಾ ರವರು, ಜ.11. ರಿಂದ ಮಾ. 01ರವರೆಗೆ ಮನೆಯಿಂದ ಹೋಗಿದ್ದು ಇದರ ಮಧ್ಯೆ ಪತಿ ಉಮ್ಮರ್ ಫಾರೂಕ್ ಎಂಬಾತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಫೆ.29 ರಂದು ವಶಕ್ಕೆ ಪಡೆದಿದ್ದು ಈ ಮಾಹಿತಿಯನ್ನು ಪಿರ್ಯಾದಿದಾರರ ನೆರೆಕರೆಯವರು ದೂರವಾಣಿ ಮೂಲಕ ತಿಳಿಸಿದ್ದರು.
‌‌ಇದನ್ನು‌ ತಿಳಿದ ಸುಬರ್ನಿರವರು ಮಾ.02 ರಂದು ಮನೆಗೆ ಬಂದು ನೋಡಿದಾಗ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿದ್ದು ಅಲ್ಲದೇ ಮನೆಯಲ್ಲಿರುವ ಸೊತ್ತುಗಳಾದ, ಹೆಚ್ .ಪಿ ಕಂಪನಿಯ ಖಾಲಿ ಸಿಲೆಂಡರ್ -01 ಅಂದಾಜು ಮೌಲ್ಯ 4500/-, ಡಾ| ವಾಶ್ ಸೋಪ್-15 ಅಂದಾಜು ಮೌಲ್ಯ 600/-, ಲಿರ್ಲಾ ಸೊಪ್ -10 ಅಂದಾಜು ಮೌಲ್ಯ 550/-, 3 ಪವರ್ ಬ್ಯಾಂಕ್ ಅಂದಾಜು ಮೌಲ್ಯ ರೂ 4500/-, ಐ ಪೋನ್ ಏರ್ಪೋಡ್ -01 ಅಂದಾಜು ಮೌಲ್ಯ 26000/-, ಟೇಕ್ನೊ ಸ್ಮಾರ್ಟ್ ವಾಚ್ -01 ಅಂದಾಜು ಮೌಲ್ಯ 4500/-, ಡಕ್ -01 ಅಂದಾಜು ಮೌಲ್ಯ -450, ಕೋಳಿ 3-ಅಂದಾಜು ಮೌಲ್ಯ 1200/-, 2 ಟೀ ಶರ್ಟ್ ಅಂದಾಜು ಮೌಲ್ಯ ರೂ 800/-, ಮೊಬೈಲ್ ಚಾರ್ಚ್ ರ್ 03 ಅಂದಾಜು ಮೌಲ್ಯ ರೂ 950/, ಪರಪ್ಪು ದರ್ಗಾ ಬಾಕ್ಸ್ -1 ಅಂದಾಜು ಮೌಲ್ಯ 1200 ರೂ ಗುರುವಾಯನಕೆರೆ ದರ್ಗಾ ಬಾಕ್ಸ್ 01 ಅಂದಾಜು ಮೌಲ್ಯ 1200 ರೂ, ಆಗಿದ್ದು ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ 46,450/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆ ಅ.ಕ್ರ ನಂ 34/2024 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸೆಕ್ಟ‌ರ್ ಆಗಿ ಬಸಲಿಂಗಯ್ಯ ಜಿ. ಸುಬ್ರಪುರಮಠ್ ನೇಮಕ

Suddi Udaya

ಬಾರ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಧರ್ಮಸಂರಕ್ಷಣ ರಥ ಯಾತ್ರೆಗೆ ಸಾಕ್ಷಿಯಾದ ಸಾವಿರ ಸಾವಿರ ಸಂಖ್ಯೆಯ ಭಕ್ತಾದಿಗಳು: ಉಜಿರೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ನಾಮಸ್ಮರಣೆಯೊಂದಿಗೆ ಪಾದಯಾತ್ರೆಗೆ ಅದ್ದೂರಿ ಚಾಲನೆ

Suddi Udaya

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಸ್ಟಾರ್ಲೈನ್ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಕಾರ್ಕಳದಲ್ಲಿ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ವಿರುದ್ಧ ಮಾನ ಹಾನಿ:ಬಂಗೇರ ಅಭಿಮಾನಿಗಳಿಂದ ವೇಣೂರು ಪೊಲೀಸರಿಗೆ ದೂರು

Suddi Udaya

ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಡಾ| ಆದಂ ಉಸ್ಮಾನ್ ನಿಧನ

Suddi Udaya
error: Content is protected !!