25.3 C
ಪುತ್ತೂರು, ಬೆಳ್ತಂಗಡಿ
May 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ: ಮನೆಗೆ ನುಗ್ಗಿದ್ದ ಕಳ್ಳರು : ಸುಮಾರು ರೂ.46450 ಮೌಲ್ಯದ ಸೊತ್ತುಗಳು ಕಳವು

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಸುಬರ್ನಿ ರವರ ಮನೆಯಲ್ಲಿ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿ ಯಾರೋ ಕಳ್ಳರು ಒಳಗೆ ನುಗ್ಗಿ ಸುಮಾರು ರೂ.46450 ಮೌಲ್ಯ ದ ಸೊತ್ತುಗಳನ್ನು ಕಳವುಗೈದ ಘಟನೆ ನಡೆದಿದೆ.

ಕಳಿಯ ಗ್ರಾಮದ ಸುಬರ್ನಿ ಬಿರಾ ರವರು, ಜ.11. ರಿಂದ ಮಾ. 01ರವರೆಗೆ ಮನೆಯಿಂದ ಹೋಗಿದ್ದು ಇದರ ಮಧ್ಯೆ ಪತಿ ಉಮ್ಮರ್ ಫಾರೂಕ್ ಎಂಬಾತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಫೆ.29 ರಂದು ವಶಕ್ಕೆ ಪಡೆದಿದ್ದು ಈ ಮಾಹಿತಿಯನ್ನು ಪಿರ್ಯಾದಿದಾರರ ನೆರೆಕರೆಯವರು ದೂರವಾಣಿ ಮೂಲಕ ತಿಳಿಸಿದ್ದರು.
‌‌ಇದನ್ನು‌ ತಿಳಿದ ಸುಬರ್ನಿರವರು ಮಾ.02 ರಂದು ಮನೆಗೆ ಬಂದು ನೋಡಿದಾಗ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿದ್ದು ಅಲ್ಲದೇ ಮನೆಯಲ್ಲಿರುವ ಸೊತ್ತುಗಳಾದ, ಹೆಚ್ .ಪಿ ಕಂಪನಿಯ ಖಾಲಿ ಸಿಲೆಂಡರ್ -01 ಅಂದಾಜು ಮೌಲ್ಯ 4500/-, ಡಾ| ವಾಶ್ ಸೋಪ್-15 ಅಂದಾಜು ಮೌಲ್ಯ 600/-, ಲಿರ್ಲಾ ಸೊಪ್ -10 ಅಂದಾಜು ಮೌಲ್ಯ 550/-, 3 ಪವರ್ ಬ್ಯಾಂಕ್ ಅಂದಾಜು ಮೌಲ್ಯ ರೂ 4500/-, ಐ ಪೋನ್ ಏರ್ಪೋಡ್ -01 ಅಂದಾಜು ಮೌಲ್ಯ 26000/-, ಟೇಕ್ನೊ ಸ್ಮಾರ್ಟ್ ವಾಚ್ -01 ಅಂದಾಜು ಮೌಲ್ಯ 4500/-, ಡಕ್ -01 ಅಂದಾಜು ಮೌಲ್ಯ -450, ಕೋಳಿ 3-ಅಂದಾಜು ಮೌಲ್ಯ 1200/-, 2 ಟೀ ಶರ್ಟ್ ಅಂದಾಜು ಮೌಲ್ಯ ರೂ 800/-, ಮೊಬೈಲ್ ಚಾರ್ಚ್ ರ್ 03 ಅಂದಾಜು ಮೌಲ್ಯ ರೂ 950/, ಪರಪ್ಪು ದರ್ಗಾ ಬಾಕ್ಸ್ -1 ಅಂದಾಜು ಮೌಲ್ಯ 1200 ರೂ ಗುರುವಾಯನಕೆರೆ ದರ್ಗಾ ಬಾಕ್ಸ್ 01 ಅಂದಾಜು ಮೌಲ್ಯ 1200 ರೂ, ಆಗಿದ್ದು ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ 46,450/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆ ಅ.ಕ್ರ ನಂ 34/2024 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಪಟ್ರಮೆ ಸಂಕೇಶದಲ್ಲಿ ವಾಸದ ಮನೆಯ ಹಿಂಬದಿಯಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ತಯಾರಿಕಾ ಅಡ್ಡೆ- ಅಬಕಾರಿ ಇಲಾಖೆಯಿಂದ ದಾಳಿ ಆರೋಪಿ ಪರಾರಿ ಸೊತ್ತುಗಳು ವಶ

Suddi Udaya

ನಾರಾವಿ ಅಂತರ್ ಕಾಲೇಜು ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ :ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ

Suddi Udaya

ಕುತ್ಲೂರು ಸ.ಉ.ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಗೆ ಗೌರವ

Suddi Udaya

ಉಜಿರೆ: ಅರಳಿ ಮಿತ್ರ ಯುವಕ ಮಂಡಲದ ಅಧ್ಯಕ್ಷರಾಗಿ ಅಶೋಕ್, ಕಾರ್ಯದರ್ಶಿಯಾಗಿ ಅನಿಲ್‌ ಆಯ್ಕೆ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಶಿವನ ಸನ್ನಿಧಿಗೆ ಹರಿದು ಬಂದ ಬೃಹತ್ ಹಸಿರುವಾಣಿ ಹೊರೆಕಾಣಿಕೆ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ ರವರಿಂದ ಉಗ್ರಾಣ ಮುಹೂರ್ತ

Suddi Udaya
error: Content is protected !!