ಮಡಂತ್ಯಾರು: ಶ್ರೀ ರಾಮ ನಗರ ಹಾರಬೆ ದುಗಲಾಯ ಮತ್ತು ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ: ಗಣಹೋಮ, ನಾಗ ದೇವರಿಗೆ ನಾಗ ತಂಬಿಲ ಸೇವೆ

Suddi Udaya

ಪಾರೆಂಕಿ: ಮಡಂತ್ಯಾರು ಸಮೀಪದ ಶ್ರೀ ರಾಮ ನಗರ ಹಾರಬೆ ದುಗಲಾಯ ಮತ್ತು ಗುಳಿಗ ದೈವಗಳ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಗಣಹೋಮ, ನಾಗ ದೇವರಿಗೆ ನಾಗ ತಂಬಿಲ ಸೇವೆ ಮಹಾಪೂಜೆ ಪ್ರಸಾದ ವಿತರಣೆ‌ ಸಾರ್ವಜನಿಕ‌ ಅನ್ನಸಂತರ್ಪಣೆ ಮಾ 14 ರಂದು ಜರಗಿತು.

ಮಾಲಾಡಿ ಅಂತರ ಮಂಜುನಾಥ ಭಟ್‌ ಅಸ್ರಣ್ಣರು ವಿಧಿ ವಿಧಾನಗಳೊಂದಿಗೆ ಪೂಜಾ‌‌ ಕಾರ್ಯಕ್ರಮವನ್ನು ನೆರವೇರಿಸಿದರು. ನೇಮೋತ್ಸವ ಸಮಿತಿ ಅಧ್ಯಕ್ಷ ಸುದೀರ್ ಪೂಜಾರಿ ಹಾರಬೆ, ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ ಹಾರಬೆ, ಪ್ರಧಾನ ಕಾರ್ಯದರ್ಶಿ ಚೇತನ್ ಪೂಜಾರಿ, ಕೋಶಾಧಿಕಾರಿ ಹರಿಣಾಕ್ಷಿ ಮತ್ತು ಸಮಿತಿ ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದರು. ಸಾಯಂಕಾಲ ಸತ್ಯನಾರಾಯಣ ಪೂಜೆ ವಿಧ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ಇವರಿಂದ ಭಜನಾ ಕಾರ್ಯಕ್ರಮ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಂತರ ದೈವಗಳ ನೇಮೋತ್ಸವ ಜರಗಲಿದೆ.

Leave a Comment

error: Content is protected !!