25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅನಾಥರಾಗಿ ತಿರುಗಿಡುತ್ತಿದ್ದ ವಯೋವೃದ್ಧ ತಂದೆಯನ್ನು ಮಗನ ಜವಾಬ್ದಾರಿ ಗೆ ವಹಿಸಿದ ವೇಣೂರು ಪೋಲೀಸರು

ಬೆಳ್ತಂಗಡಿ : ಮಾ.13ರಂದು ರಾತ್ರಿ 12 ಗಂಟೆಗೆ ನಾಲ್ಕೂರು ಗ್ರಾಮದ ಆಸುಪಾಸಿನಲ್ಲಿ ಜನ ನಿಬಿಡ ಪ್ರದೇಶದಲ್ಲಿ ವಯೋವೃದ್ಧ ರೋರ್ವರು ಅನಾಥರಾಗಿ ಹಸಿವಿನಿಂದ ನರಳುತಿದ್ದು ಸ್ಥಳೀಯ ಬಳಂಜ ಪಂಚಾಯತ್ ಸದಸ್ಯ ರವೀಂದ್ರ ಅಮೀನ್ ಬಳಗದವರು ಪೋಲೀಸ್ ರ ಸಹಾಯದಿಂದ ಅವರನ್ನು ಗುಂಡೂರಿಯ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ತಾತ್ಕಾಲಿಕ ನೆಲೆಗೆ ವ್ಯವಸ್ಥೆ ಮಾಡಿದರು.

ಪೋಲಿಸರು ಈ ವಯೋವೃದ್ಧರ ಮಕ್ಕಳನ್ನು ಸಂಪರ್ಕಿಸಿ, ಮಾ.14ರಂದು ಇಂದು ವೇಣೂರು ಪೋಲೀಸ್ ಠಾಣೆಗೆ ಬಂದ ಮಗನಿಗೆ ಪೊಲೀಸರು ಬುದ್ಧಿವಾದ ಹೇಳಿ ಈ ವಯೋ ವೃದ್ಧ ತಂದೆಯನ್ನು ಮಗನ ಜತೆ ಕಳುಹಿಸಲಾಯಿತು.

ಕಿವಿ ಕೇಳದ ಈ ವಯೋವೃದ್ಧರಲ್ಲಿ ಸರಿಯಾದ ಮಾಹಿತಿ ತಿಳಿಯಲು ಹರಸಾಹಸ ಪಡೆಯಲಾಯಿತು.ಈ ಮೂಲಕ ಪೋಲೀಸರು ಮಗನ ಸಂಪರ್ಕ ವನ್ನು ಸಾಧಿಸಿ ಪೋಲೀಸ್ ಠಾಣೆಗೆ ಕರೆಯಿಸಿ ಸಾವ೯ಜನಿಕರ ಮೆಚ್ಚುಗೆಗೆ ಪಾತ್ರರಾದರು.

ವಯೋವೃದ್ಧ ಉಡುಪಿಯ ಶಂಕರನಾರಾಯಣ ಪೋಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು. ವಯೋ ಸಹಜ ಡಿಮೆನ್ಸಿಯಾ ರೋಗದಿಂದ ಬಳಲು ತಿದ್ದುರು. ಮನೆಯಲ್ಲಿ ನಿಲ್ಲದೆ ಊರೂರು ತಿರುಗುವ ಚಾಳಿ ಇದ್ದು.ಮರಗುಳಿತನವೂ ಇದೆ.

ಮಗನಿಗೆ ತಂದೆಯ ಹಸ್ತಾಂತರ ದ ಸಮಯ ರವೀಂದ್ರ ಅಮೀನ್ ಮತ್ತು ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಉಪಸ್ಥಿತರಿದ್ದರು.

Related posts

ನಾರ್ಯ ಪೊದುಂಬಿಲ ಕೆಸರ್ ದ ಕಂಡಡ್ ಪರ್ಬದ ಗೊಬ್ಬು ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಜೆಜೆಸಿ ಮತ್ತು ಲೇಡಿ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರೇಕ್ಷಿತ್ ತೃತೀಯ ಸ್ಥಾನ

Suddi Udaya

ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಬಗ್ಗೆ ಸಮಾಲೋಚನೆ ಸಭೆ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ಜಿಲ್ಲಾಮಟ್ಟದ ಸಮಾಲೋಚನೆ ಸಭೆ

Suddi Udaya

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಗರ್ಡಾಡಿ ನಂದಿಬೆಟ್ಟ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya
error: Content is protected !!