31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಳೆಂಜ ಗ್ರಾ.ಪಂ. ಹಾಗೂ ಜನನಿ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ

ಕಳೆಂಜ: ಜನನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಇದರ ಸಮ್ಮಿಲನದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಎ.ಕೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಜನನಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಾವಿತ್ರಿ ರೈ, ಸಂಪನ್ಮೂಲ ವ್ಯಕ್ತಿ ಉಷಾ ಕಾಮತ್, ಕಿರಿಯ ಆರೋಗ್ಯ ಸಹಾಯಕಿ ನಿಖಿತಾ ಮತ್ತು ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕಿ ವೀಣಾ, ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಹಾಗೂ ಕಾರ್ಯದರ್ಶಿ ಹೊನ್ನಪ್ಪ ಗೌಡ ಉಪಸ್ಥಿತರಿದ್ದರು.

ಜಯಶ್ರೀ ನಿರೂಪಿಸಿ ಹಾಗೂ ಸ್ವಾಗತವನ್ನು ಜನನಿ ಸಂಜೀವಿನಿ ಒಕ್ಕೂಟದ MBK ವಿಮಲರವರು ಮಾಡಿದರು.ಪ್ರಾರ್ಥನೆಯನ್ನು ಜಯಶ್ರೀ ಜನನಿ ಸಂಜೀವಿನಿ ಕಾರ್ಯದರ್ಶಿ ಮಾಡಿದರು.ಸದಸ್ಯರಿಗೆ ಆಟೋಟ ಸ್ಪರ್ದೆಯನ್ನು ನಡೆಸಲಾಯಿತು.

ನಾರಿಶಕ್ತಿ ಸನ್ಮಾನವನ್ನು ಸಂಘದ 3 ಸದಸ್ಯರಿಗೆ ಮಾಡಲಾಯಿತು.ದಿವ್ಯಜೋತಿ ಸ್ತ್ರಿ ಶಕ್ತಿಯ ಭವಾನಿ ಇವರಿಗೆ ಕೋಳಿ ಸಾಕಣಿಗೆ ಶ್ರೀ ದುರ್ಗಾ ಸಂಜೀವಿನಿ ಸದಸ್ಯೆಯಾದ ಕವಿತಾ ಇವರಿಗೆ ಆಡು ಸಾಕಣಿಕೆ ಹಾಗೂ ಸುಜ್ಞಾನ ವಿಶೇಷ ಚೇತನರ ಸ್ವ ಸಹಾಯ ಸಂಘದ ಸದಸ್ಯ ಸೌರಭ ಇವರಿಗೆ ಸನ್ಮಾನಿಸಲಾಯಿತು.

ಸುಶೀಲ ಮಾ.ತಾ.ಸ, ಗೀತಾ ಶಾರದ ಮಾ.ಗ್ರಾ.ಪಂ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರುಗಳು ಒಕ್ಕೂಟದ ಪದಾಧಿಕಾರಿಗಳು, LCRP ಗಳು, ಕೃಷಿ ಸಖಿ, ಪಶುಸಖಿ, ಮಹಿಳಾ ಸಂಘದ ಸದಸ್ಯರುಗಳು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ವಿಮಲ ಎನ್ ಇವರು ಭಾಗವಹಿಸಿದರು. ಗೀತಾ ಧನ್ಯವಾದವಿತ್ತರು .

Related posts

ಗೌಡರ ಯಾನೆ ಒಕ್ಕಲಿಗ ಗ್ರಾಮ ಸಮಿತಿ ಹಾಗೂ ಶಿಶಿಲ ಗ್ರಾಮದ ಬೈಲುವಾರು ಸಮಿತಿಯ ಪದಾಧಿಕಾರಿಗಳ ಸಭೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧಜಲ ಅಭಿಯಾನ: ಡಾ| ಡಿ ವೀರೇಂದ್ರ ಹೆಗ್ಗಡೆಯವರಿಂದ ಕರಪತ್ರ ಬಿಡುಗಡೆ

Suddi Udaya

ಗೇರುಕಟ್ಟೆ ಕುಳಾಯಿ ಶ್ರೀ ಮಹಮ್ಮಾಯಿ ದೇವರಿಗೆ ಗೋಂದಲ ಪೂಜೆ

Suddi Udaya

ಕುಕ್ಕೇಡಿ ಡಾ. ಬಿ. ಆರ್ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿ ಗೆ ಹೆಚ್ಚುವರಿ ರೂ.50 ಲಕ್ಷ ಅನುದಾನ ಮಂಜೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ಭಜನಾ ಪರಿಷತ್ತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೊಯ್ಯೂರು ಪಿ ಚಂದ್ರಶೇಖರ ಸಾಲ್ಯಾನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ಹಸ್ತಾಂತರ

Suddi Udaya
error: Content is protected !!