25.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಗರ್ಡಾಡಿ: ಮುಗೇರಡ್ಕ ಶ್ರೀ ಕೊಡಮಣಿತ್ತಾಯ, ಪಡ್ತ್ರಾವಂಡಿ ಕ್ಷೇತ್ರ ಬದಿನಡೆಯಲ್ಲಿ ಪ್ರತಿಷ್ಠಾ ಮಹೋತ್ಸವ ಮತ್ತು ಸಿರಿ ಸಿಂಗಾರದ ನೇಮೋತ್ಸವ

ಗರ್ಡಾಡಿ: ಮುಗೇರಡ್ಕ ಶ್ರೀ ಕೊಡಮಣಿತ್ತಾಯ, ಪಡ್ತ್ರಾವಂಡಿ ಕ್ಷೇತ್ರ ಬದಿನಡೆಯಲ್ಲಿ ಪ್ರತಿಷ್ಠಾ ಮಹೋತ್ಸವ ಮತ್ತು ಸಿರಿ ಸಿಂಗಾರದ ನೇಮೋತ್ಸವವು ಮಾರ್ಚ್ 16 ಮತ್ತು17ರಂದು ಜರಗಲಿರುವುದು.

ಇಂದು (ಮಾ.16ರಂದು) ಸಂಜೆ ಶಿಲ್ಪಿಗಳಿಗೆ ಸಂಭಾವನೆ, ದೈವಾಲಯ ಪರಿಗ್ರಹ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹವಾಚನ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನಹೋಮ ಸಹಿತ, ವಾಸ್ತು ಹೋಮ ವಾಸ್ತು ಪೂಜೆ ಬಲಿ, ಪೀಠಶುದ್ಧಿ ಅಧಿವಾಸ, ರಾತ್ರಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ಮಾರ್ಚ್ 17ರಂದು ಪ್ರಾತಃಕಾಲ ಗಣಯಾಗ, ಬೆಳಿಗ್ಗೆ ಸಾನಿಧ್ಯ ಪ್ರತಿಷ್ಠೆ ಮತ್ತು ಸಾನಿಧ್ಯ ಕಲಶಾಭಿಷೇಕ ಮಹಮ್ಮಾಯಿ ಪೀಠ ಪ್ರತಿಷ್ಠೆ, ಗರ್ಡಾಡಿ ಗುತ್ತು ಮತ್ತು ಕುಬಳಬೆಟ್ಟು ಗುತ್ತಿನಿಂದ ಮತ್ತು ದೈವಗಳ ಭಂಡಾರ ಇಳಿಯುವುದು, ಮುಗೇರಡ್ಕ ಬದಿನಡೆ ಕ್ಷೇತ್ರದಲ್ಲಿ ದೈವಗಳ ಸಮಾಗಮ ಅಭಯವಾಕ್ಯ, ಪ್ರಧಾನ ಭಂಡಾರ ಪ್ರತಿಷ್ಠೆ, ಪಂಚವಿಂಶತಿ ಕಲಶಾಭಿಷೇಕ ಪರ್ವ ಸಂಕ್ರಾಂತಿ, ಶಾರಿ ಹಾಕುವುದು ಗೊನೆಮುಹೂರ್ತ, ಮುಹೂರ್ತ ಕಂಬ ಕೋಳಿಗುಂಟ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಎಣ್ಣೆಬೂಲ್ಯ, ಕೊಡಮಣಿತ್ತಾಯ ಪಡ್ತ್ರಾವಂಡಿ ದೈವಗಳ ಸಿರಿ ಸಿಂಗಾರದ ನೇಮೋತ್ಸವ, ರಾತ್ರಿ ದೈವಗಳ ಅಭಯವಾಕ್ಯದೊಂದಿಗೆ ಊರವರಿಗೆ ಗಂಧಬೂಳ್ಯ ವಿತರಣೆ ನಡೆಯಲಿರುವುದು.

Related posts

ವೇಣೂರು ಜುಮಾ ಮಸೀದಿಯಲ್ಲಿ 75ನೇ ಗಣರಾಜೋತ್ಸವ ದಿನಾಚರಣೆ

Suddi Udaya

ಹೊಚ್ಚ ಹೊಸ ಸಂಗ್ರಹದೊಂದಿಗೆ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್ 10% ಡಿಸ್ಕೌಂಟ್ ಸೇಲ್

Suddi Udaya

ವಿಪರೀತ ಮಳೆ : ತೆಕ್ಕಾರು ಅತಿಜಮ್ಮ ರವರ ಮನೆಯ ಮಹಡಿ ಸಂಪೂರ್ಣ ಹಾನಿ

Suddi Udaya

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗುರುವಂದನ ಮತ್ತು ಬೀಳ್ಕೊಡುಗೆ ಸಮಾರಂಭ

Suddi Udaya

ಕುಂಠಿನಿ ಮುಹಿಯ್ಯುದ್ಧೀನ್ ಅರಬಿಕ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ

Suddi Udaya
error: Content is protected !!