September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲೋಕಸಭಾ ಚುನಾವಣೆ ಹಿನ್ನೆಲೆ: ಸಿಯೋನ್ ಆಶ್ರಮ ರಜತಮಹೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಮುಂದೂಡಿಕೆ

ನೆರಿಯ: ಸಿಯೋನ್ ಆಶ್ರಮವು ಕಳೆದ 25 ವರ್ಷಗಳಿಂದ ಅಶಕ್ತ, ಅನಾಥ ಮತ್ತು ವಿಶೇಷಚೇತನರನ್ನು ಯಾವುದೇ ಜಾತಿ- ಮತ, ಬೇಧ-ಭಾವವಿಲ್ಲದೆ ಮಾತೃವಾತ್ಸಲ್ಯತೆಯಿಂದ ಆರೈಕೆ ಮಾಡುತ್ತಾ ಬಂದಿರುತ್ತದೆ. ಮಾ.22ರಂದು ಸಿಯೋನ್ ಆಶ್ರಮವು ತನ್ನ ಸೇವೆಯ 25 ಸಂವತ್ಸರಗಳನ್ನು ಪೂರ್ಣಗೊಳಿಸಿರುತ್ತದೆ. ಈ ಸಂದರ್ಭದಲ್ಲಿ “ಸಿಯೋನ್ ರಜತಮಹೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮ”ವನ್ನು ಜಂಟಿಯಾಗಿ ಆಚರಿಸಲು ಮಾ.21 ಮತ್ತು ಮಾ.22 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಲೋಕಸಭೆ ಚುನಾವಣೆಯ ಪ್ರಯುಕ್ತ ಚುನಾವಣಾ ಆಯೋಗವು ಕಟ್ಟುನಿಟ್ಟಿನ ನೀತಿಸಂಹಿತೆ ಜಾರಿಗೊಳಿಸಿದೆ. ಆದುದರಿಂದ “ಸಿಯೋನ್ ಬೆಳ್ಳಿಹಬ್ಬ” ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯಾತಿಗಣ್ಯರಿಗೆ ಬರಲು ಅನಾನುಕೂಲವಾಗುವುದರಿಂದ ನಿಗದಿಪಡಿಸಲಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಿಯೋನ್ ಆಶ್ರಮದ ಮಾನೇಜಿಂಗ್ ಟ್ರಸ್ಟಿ ಯುಸಿ ಪೌಲೋಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಸ್ಪರ್ಧಿಸುವ ಅಪೇಕ್ಷೆ: ಪತ್ರಿಕಾಗೋಷ್ಠಿ

Suddi Udaya

ಗರ್ಡಾಡಿ: ಕುಂಡದಬೆಟ್ಟು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Suddi Udaya

ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರ ವ್ಯಾಪ್ತಿಯ ಶಾಲೆಯ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

Suddi Udaya

ವಿ.ಹಿಂ.ಪ. ಬಜರಂಗದಳ ಮಾತೃಮಂಡಳಿ ದುರ್ಗವಾಹಿನಿ ಹಾಗೂ ಮುಂಡಾಜೆ ಮಂಜುಶ್ರೀ ಭಜನಾಮಂಡಳಿಯಿಂದ ಧನಸಹಾಯ ಹಾಗೂ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಧಮ೯ಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ ತನಿಖೆ: ಬೆಳ್ತಂಗಡಿ ಠಾಣಾ ಬಳಿ ಎಸ್.ಐ.ಟಿ ಕಚೇರಿ

Suddi Udaya

ಸರಕಾರಿ ನೌಕರರ ಕ್ರೀಡಾಕೂಟ: ಯೋಗಾಸನ ಸ್ಪರ್ಧೆಯಲ್ಲಿ ರೆಖ್ಯದ ಬಾಲಕೃಷ್ಣರವರಿಗೆ ಚಿನ್ನದ ಪದಕ

Suddi Udaya
error: Content is protected !!