24.4 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಪೆರಿಂಜೆ: ಪಡ್ಡ್ಯಾರಬೆಟ್ಟ ದೈವಸ್ಥಾನ ಕ್ಷೇತ್ರ ವಾರ್ಷಿಕ ಜಾತ್ರೋತ್ಸವ ಸಂಪನ್ನ, ಸಾಧಕರಿಗೆ ಗೌರವ, ವಿದ್ಯಾರ್ಥಿ ವೇತನ ವಿತರಣೆ

ಬೆಳ್ತಂಗಡಿ, : ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಮಂಗಳವಾರ ರಾತ್ರಿ ನಡೆದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಸಮ್ಮಾನಿಸಲಾಯಿತು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೇಣೂರಿನಲ್ಲಿ ವೈದ್ಯರಾಗಿ, 38 ವರ್ಷಗಳಿಂದ ಬಡಜನತೆಗೆ ಸೇವೆ ನೀಡುತ್ತಾ ಬಂದಿರುವ ಡಾ.ಕೆ.ಎನ್. ರವೀಂದ್ರ ಪ್ರಸಾದ್ ಬಡಕೋಡಿಗುತ್ತು, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾ‌ನ ಆಡಳಿತ ಮೊಕ್ತೇಸರ, ಸಹಕಾರಿ ಕ್ಷೇತ್ರ, ಗ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ ವೇಣೂರು ಕರಿಮಣೇಲು ಖಂಡಿಗ ಜಯರಾಮ್ ಶೆಟ್ಟಿ, ಮತ್ತುರಾಜಕೀಯ, ಸಾಮಾಜಿಕ, ಸಹಕಾರಿ ಕ್ಷೇತ್ರದ ಸಾಧನೆಗಾಗಿ ಪೆರಾಡಿ ಸತೀಶ್ ಕಾಶಿಪಟ್ಣ ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಗೌರವ ಸ್ವೀಕರಿಸಿದ ಸತೀಶ್ ಕಾಶಿಪಟ್ನ ಮಾತನಾಡಿ ಪಡ್ಯಾರ ಬೆಟ್ಟು ಕ್ಷೇತ್ರದ ದೈವಗಳು ಅವರೆ ದೇವರು ಅವರೆ.ಸಹಸ್ರಾರು ಭಕ್ತಾದಿಗಳಿಗೆ ಅಭಯನೀಡುವ ಶ್ರಿ ಕೊಡಮಣಿತ್ತಾಯ ಸನ್ನಿಧಿಯಲ್ಲಿ ಗೌರವ ಸ್ವಿಕರಿಸುವುದು ಎಂದರೆ ದೇವರ ಅನುಗ್ರಹ ಪಡೆದಂತೆ. ಇಲ್ಲಿನ ಆಡಳಿತ ಮೊಕ್ತೆಸರರಾದ ಜೀವಂದರ್ ಕುಮಾರ್ ರವರು ಮಗುವಿನಂತ ಮನಸ್ಸಿನವರು.ಕ್ಷೇತ್ರದ ಸಾನಿದ್ಯವನ್ನು ಹೆಚ್ಚಿಸಿದವರು.ಭಕ್ತರನ್ನು ಪ್ರೀತಿಯಿಂದ ಕಾಣುವ ಇವರು ಎಲ್ಲರೊಂದಿಗೆ ಮುಕ್ತವಾಗಿ ,ಗೌರವಯುತವಾಗಿ ನಡೆಯುವವರು.ಇವರ ಪ್ರೀತಿಯ ಗೌರವ ಪಡೆಯುವುದು ಪೂರ್ವ ಜನ್ಮದ ಪುಣ್ಯದ ಫಲ ಎಂದರು.ಡಾ ಕೆ ಎನ್ ರವೀಂದ್ರ ಪ್ರಸಾದ್ ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರತಿಯೊಬ್ಬರು ದೈವ ದೇವರಲ್ಲಿ ಭಕ್ತಿ ನಂಬಿಕೆ ಇಡುವ ಜೊತೆ ತಮ್ಮ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಹಿರಿಯರ ಅಹಾರ ಪದ್ದತಿಯೇ ಶ್ರೇಷ್ಠ ಅದನ್ನೆ ಪಾಲಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು‌.

ಅನುವಂಶೀಯ ಆಡಳಿತ ಮೊಕ್ತೇಸರಎ.ಜೀವಂದರ್ ಕುಮಾರ್, ಪತ್ನಿಸುಲೋಚನಾ, ಪುತ್ರರಾದ ವಿಕಾಸ್ ಜೈನ್, ವಿಶ್ವಾಸ್ ಜೈನ್ ,ಕ್ಷೇತ್ರದ ಪ್ರದಾನ ಅರ್ಚಕ ರಾಮದಾಸ ಅಸ್ರಣ್ಣ ಅವರಿಂದ ಸಮ್ಮಾನ ಕಾರ್ಯಕ್ರಮ ನೆರವೇರಿತು.ಪ್ರವೀಣ್ ಮೂಡುಕೋಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ದೈವದ,ಕುರುಸಂಬಿಲ ನೇಮೋತ್ಸವ ನಡೆಯಿತು.

Related posts

ಲಾಯಿಲ: ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೋತ್ಸವ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ

Suddi Udaya

ಗೋವಿಂದೂರು ರಾಜ್ಯ ಹೆದ್ದಾರಿಯಲ್ಲಿ ಜೀವ ಬಲಿ ಪಡೆಯಲು ಕಾಯುತ್ತಿದೆ ರಸ್ತೆ ಗುಂಡಿಗಳ ಸಾಲು

Suddi Udaya

ಪಟ್ರಮೆ ಬಸ್ ನಿಲ್ದಾಣದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಛೇರಿ ಶ್ರೀ ವಿಷ್ಣು ಕಾಂಪ್ಲೆಕ್ಸ್‌ನ ಕಟ್ಟಡಕ್ಕೆ ಸ್ಥಳಾಂತರ

Suddi Udaya

ಆಡಳಿತ ಪಕ್ಷ ರಾಜ್ಯಪಾಲರಿಂದ ಮಾಡಿಸಿರುವ ಭಾಷಣ ಕೇವಲ ಸಾಹಿತ್ಯಿಕವಾಗಿ ರಂಜನೀಯವಾಗಿತ್ತೇ ಹೊರತು ಅಭಿವೃದ್ಧಿಯ ಚಿಂತನೆ ಇಲ್ಲದೆ ನೀರಸವಾಗಿತ್ತು: ಎಂ.ಎಲ್‌.ಸಿ ಪ್ರತಾಪಸಿಂಹ ನಾಯಕ್

Suddi Udaya

ಸಂಪೂರ್ಣ ಹಾಳಾದ ಧರ್ಮಸ್ಥಳ-ಮುಳಿಕ್ಕಾರು ರಸ್ತೆ: ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ, ಅಲ್ಲಲ್ಲಿ ಹೂತು ಹೋಗುವ ವಾಹನಗಳು

Suddi Udaya
error: Content is protected !!