ಲೋಕಸಭಾ ಚುನಾವಣೆ ಹಿನ್ನೆಲೆ: ಸಿಯೋನ್ ಆಶ್ರಮ ರಜತಮಹೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಮುಂದೂಡಿಕೆ

Suddi Udaya

ನೆರಿಯ: ಸಿಯೋನ್ ಆಶ್ರಮವು ಕಳೆದ 25 ವರ್ಷಗಳಿಂದ ಅಶಕ್ತ, ಅನಾಥ ಮತ್ತು ವಿಶೇಷಚೇತನರನ್ನು ಯಾವುದೇ ಜಾತಿ- ಮತ, ಬೇಧ-ಭಾವವಿಲ್ಲದೆ ಮಾತೃವಾತ್ಸಲ್ಯತೆಯಿಂದ ಆರೈಕೆ ಮಾಡುತ್ತಾ ಬಂದಿರುತ್ತದೆ. ಮಾ.22ರಂದು ಸಿಯೋನ್ ಆಶ್ರಮವು ತನ್ನ ಸೇವೆಯ 25 ಸಂವತ್ಸರಗಳನ್ನು ಪೂರ್ಣಗೊಳಿಸಿರುತ್ತದೆ. ಈ ಸಂದರ್ಭದಲ್ಲಿ “ಸಿಯೋನ್ ರಜತಮಹೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮ”ವನ್ನು ಜಂಟಿಯಾಗಿ ಆಚರಿಸಲು ಮಾ.21 ಮತ್ತು ಮಾ.22 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಲೋಕಸಭೆ ಚುನಾವಣೆಯ ಪ್ರಯುಕ್ತ ಚುನಾವಣಾ ಆಯೋಗವು ಕಟ್ಟುನಿಟ್ಟಿನ ನೀತಿಸಂಹಿತೆ ಜಾರಿಗೊಳಿಸಿದೆ. ಆದುದರಿಂದ “ಸಿಯೋನ್ ಬೆಳ್ಳಿಹಬ್ಬ” ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯಾತಿಗಣ್ಯರಿಗೆ ಬರಲು ಅನಾನುಕೂಲವಾಗುವುದರಿಂದ ನಿಗದಿಪಡಿಸಲಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಿಯೋನ್ ಆಶ್ರಮದ ಮಾನೇಜಿಂಗ್ ಟ್ರಸ್ಟಿ ಯುಸಿ ಪೌಲೋಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!