ಹಲವು ಸಮಯದ ಹಿಂದೆ ಮನೆ ತೊರೆದಿದ್ದ ಕಾಯರ್ತಡ್ಕ ಮಾಣಿಂಗೇರಿ ರಾಜು ಅವರ ಶವ ಪುದುವೆಟ್ಟು ಪದವು ಬಸ್ಸ್ಟ್ಯಾಂಡ್ ಬಳಿಯ ಕಾಡಿನಲ್ಲಿ ಪತ್ತೆ

Suddi Udaya

ಪುದುವೆಟ್ಟು : ಹಲವು ಸಮಯದ ಹಿಂದೆ ಮನೆ ತೊರೆದಿದ್ದ ಕಾಯರ್ತಡ್ಕ ಮಾಣಿಂಗೇರಿ ನಿವಾಸಿ ರಾಜು ಎಂಬಾತನ ಶವ ಪುದುವೆಟ್ಟು ಪದವು ಬಸ್ಸ್ಟ್ಯಾಂಡ್ ಬಳಿಯಿಂದ ಸ್ವಲ್ಪ ದೂರದ ಕಾಡಿನಲ್ಲಿ ದೊರೆತಿದೆ ಕಾಡಿಗೆ ಹುಳಿ ಕೊಯ್ಯಲೆಂದು ತೆರಳಿದವರಿಗೆ ತಲೆ ಬುರುಡೆ ಮತ್ತು ಎಲುಬು ಮಾತ್ರ ಇರುವ ಶವ ಕಾಣಸಿಕ್ಕಿದು ಹತ್ತಿರದಲ್ಲಿ ಬ್ಯಾಗ್, ಮದ್ಯದ ಬಾಟಲಿ, ನೀರಿನ ಬಾಟಲಿ ದೊರೆತಿದೆ.

ಬ್ಯಾಗ್ ನಲ್ಲಿ ಆಧಾರ್ ಕಾರ್ಡ್ ದೊರೆತಿದ್ದು ಅದರಲ್ಲಿ ರಾಜು ಮಾಣಿಂಗೇರಿ ಕಾಯರ್ತಡ್ಕ ಎಂದಿದ್ದು ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು ರಾಜುವಿನ ಪುತ್ರನನ್ನು ಸ್ಥಳಕ್ಕೆ ಕರೆಸಿದ್ದು ಶವ ರಾಜುವವರದ್ದೆ ಎಂದು ಗುರುತು ಹಿಡಿದಿದ್ದಾರೆ. ರಾಜು ಮೃತ ಪಡಲು ಸ್ಪಷ್ಟ ಕಾರಣ ತನಿಖೆಯಿಂದ ತಿಳಿದು ಬರಬೇಕಾಗಿದೆ.ಶವವದ ಅವಶೇಷಗಳನ್ನು ಡಿ.ಎನ್.ಎ ಪರೀಕ್ಷೆ ಗೆ ಒಳಪಡಿಸುವ ಸಾಧ್ಯತೆಗಳ‌ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದಾರೆ.

Leave a Comment

error: Content is protected !!