April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹಲವು ಸಮಯದ ಹಿಂದೆ ಮನೆ ತೊರೆದಿದ್ದ ಕಾಯರ್ತಡ್ಕ ಮಾಣಿಂಗೇರಿ ರಾಜು ಅವರ ಶವ ಪುದುವೆಟ್ಟು ಪದವು ಬಸ್ಸ್ಟ್ಯಾಂಡ್ ಬಳಿಯ ಕಾಡಿನಲ್ಲಿ ಪತ್ತೆ

ಪುದುವೆಟ್ಟು : ಹಲವು ಸಮಯದ ಹಿಂದೆ ಮನೆ ತೊರೆದಿದ್ದ ಕಾಯರ್ತಡ್ಕ ಮಾಣಿಂಗೇರಿ ನಿವಾಸಿ ರಾಜು ಎಂಬಾತನ ಶವ ಪುದುವೆಟ್ಟು ಪದವು ಬಸ್ಸ್ಟ್ಯಾಂಡ್ ಬಳಿಯಿಂದ ಸ್ವಲ್ಪ ದೂರದ ಕಾಡಿನಲ್ಲಿ ದೊರೆತಿದೆ ಕಾಡಿಗೆ ಹುಳಿ ಕೊಯ್ಯಲೆಂದು ತೆರಳಿದವರಿಗೆ ತಲೆ ಬುರುಡೆ ಮತ್ತು ಎಲುಬು ಮಾತ್ರ ಇರುವ ಶವ ಕಾಣಸಿಕ್ಕಿದು ಹತ್ತಿರದಲ್ಲಿ ಬ್ಯಾಗ್, ಮದ್ಯದ ಬಾಟಲಿ, ನೀರಿನ ಬಾಟಲಿ ದೊರೆತಿದೆ.

ಬ್ಯಾಗ್ ನಲ್ಲಿ ಆಧಾರ್ ಕಾರ್ಡ್ ದೊರೆತಿದ್ದು ಅದರಲ್ಲಿ ರಾಜು ಮಾಣಿಂಗೇರಿ ಕಾಯರ್ತಡ್ಕ ಎಂದಿದ್ದು ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು ರಾಜುವಿನ ಪುತ್ರನನ್ನು ಸ್ಥಳಕ್ಕೆ ಕರೆಸಿದ್ದು ಶವ ರಾಜುವವರದ್ದೆ ಎಂದು ಗುರುತು ಹಿಡಿದಿದ್ದಾರೆ. ರಾಜು ಮೃತ ಪಡಲು ಸ್ಪಷ್ಟ ಕಾರಣ ತನಿಖೆಯಿಂದ ತಿಳಿದು ಬರಬೇಕಾಗಿದೆ.ಶವವದ ಅವಶೇಷಗಳನ್ನು ಡಿ.ಎನ್.ಎ ಪರೀಕ್ಷೆ ಗೆ ಒಳಪಡಿಸುವ ಸಾಧ್ಯತೆಗಳ‌ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಗಳನ್ನು ಕೈಗೊಂಡಿದ್ದಾರೆ.

Related posts

ಭಾರಿ ಮಳೆಯಿಂದಾಗಿ ಕಾರ್ಯತ್ತಡ್ಕ ಕುಲಾಡಿ ಸೇತುವೆಯ ಬಳಿ ಧರೆಕುಸಿತ: ಅಡಿಕೆ ಗಿಡಗಳು ನೀರು ಪಾಲು

Suddi Udaya

ಬಿಜೆಪಿ ಕಳೆಂಜ ಬೂತ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya

ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ ವತಿಯಿಂದ ಉಚಿತ ಶಾಲಾ ಬ್ಯಾಗ್ ವಿತರಣೆ

Suddi Udaya

ಹೊಕ್ಕಾಡಿಗೋಳಿ ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಇದರ ಆಶ್ರಯದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ರೆಖ್ಯ : ಶೌರ್ಯ ವಿಪತ್ತು ಸ್ವಯಂ ಸೇವಕ ತಂಡದಿಂದ ನೆಲ್ಯಡ್ಕ ಶಾಲೆಯಲ್ಲಿ ಕೈತೋಟ ನಿರ್ಮಾಣ

Suddi Udaya

ಕರಿಮಣೇಲು ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ: ನವೀಕರಣಗೊಂಡ ಸಭಾಭವನ ಹಾಗೂ ಹೊಸದಾಗಿ ನಿರ್ಮಿಸಿದ ಪಾಕ ಶಾಲೆ, ಭೋಜನ ಶಾಲೆಯ ಲೋಕಾರ್ಪಣೆ

Suddi Udaya
error: Content is protected !!