ಮಾ.24: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ಬೆಳ್ತಂಗಡಿಗೆ ಭೇಟಿ

Suddi Udaya

ಬೆಳ್ತಂಗಡಿ: ದ.ಕ ಜಿಲ್ಲೆಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟರವರ ಮಾ.24ರಂದು ಬೆಳ್ತಂಗಡಿಗೆ ಆಗಮಿಸುತ್ತಿದ್ದು ತಾಲೂಕಿನ ವಿವಿಧ ಗಣ್ಯರ ಹಾಗೂ ಪಕ್ಷದ ಪ್ರಮುಖರ ಕಾರ್ಯಕರ್ತರ ಭೇಟಿಯಾಗಲಿದ್ದಾರೆ.

ಬೆಳಿಗ್ಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ, ಹೊಸಂಗಡಿ ಪಡ್ಡ್ಯಾರಬೆಟ್ಟ ಜೀವಂದರ್ ಜೈನ್ ಭೇಟಿ, ನಾರಾವಿ-ಅಳದಂಗಡಿ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ, ಕುವೆಟ್ಟು ಕಣಿಯೂರು ಶಕ್ತಿಕೇಂದ್ರದ ಸಭೆ, ನಂತರ ಲಾಯಿಲ ಶ್ರೀ ವೆಂಕಟರಮಣ ದೇವರ ದರ್ಶನ, ಲಾಯಿಲ ಮತ್ತು ನಗರ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ, ಕುತ್ಯಾರು ಸೋಮನಾಥೇಶ್ವರ ದೇವರ ದರ್ಶನ, ಬೆಳ್ತಂಗಡಿ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ, ,ಮಿತ್ತಬಾಗಿಲು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭೇಟಿ, ಬಂಗಾಡಿ ಅರಮನೆ ಯಶೋಧರ ಬಳ್ಳಾಲ್ ರವರ ಭೇಟಿ, ಮುಂಡಾಜೆ ಶಕ್ತಿಕೇಂದ್ರದ ಅಧ್ಯಕ್ಷರ ಮನೆ ಭೇಟಿ, ಹಿರಿಯರಾದ ಮೋಹನ್ ರಾವ್ ಕಲ್ಮಂಜ ರವರ ಮನೆಗೆ ಭೇಟಿ, ಧರ್ಮಸ್ಥಳ ಉಜಿರೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಭೇಟಿ, ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಾಗೂ ಹಲವು ಕಡೆ ಭೇಟಿ ನೀಡಲಿದ್ದಾರೆ.

Leave a Comment

error: Content is protected !!