July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ನಲ್ಲಿ ಗುರುಜಯಂತಿ ಆಚರಣೆ

ತೋಟತ್ತಾಡಿ: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ತೋಟತ್ತಾಡಿಯಲ್ಲಿ ಸೆ.07 ರಂದು ಶ್ರೀ ನಾರಾಯಣ ಗುರುಗಳ 171ನೇ ವರ್ಷದ ಗುರುಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಬೆಳಿಗ್ಗೆ ಗುರುಪೂಜೆ ಬಳಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬಾಲಕೃಷ್ಣ ಸೌತಡ್ಕ ಉದ್ಘಾಟನೆ ಮಾಡಿದರು.

ಸಂಘದ ಸದಸ್ಯರ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ತೆರ್ಗಡೆಯಾದ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಆಟೋಟ ಸ್ಪರ್ಧೆ ಯ ಬಹುಮಾನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುರೇಶ್. ಎಮ್.ಎನ್., ಯೂನಿಯನ್ ಕೌಸಿಲರಾದ ಉನಿಕೃಷ್ಣನ್, ಉಪಾಧ್ಯಕ್ಷ ಶಿವರಾಜನ್, ಗೌರವ ಅಧ್ಯಕ್ಷ ಚಿದಾನಂದ, ಮಹಿಳಾ ಸಂಘ ಅಧ್ಯಕ್ಷೆ ಸಿಂಧು ಅಜಿತ್, ಯೂತ್ ಮೂಮೆಂಟ್ ಅಧ್ಯಕ್ಷ ಸುಧೀರ್ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮನೋಜ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಜನ ಭಾಗಿಯಾಗಿ 20 ಬಗೆಯ ಪದಾರ್ಥಗಳು ಹಾಗೂ ಪಾಯಸದೊಂದಿಗೆ ಚದಯ ಸದ್ಯ ಸವಿದರು.

Related posts

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾ ಬಹು ನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದಲ್ಲಿ ಪುತ್ತೂರಿನ ಬೆಡಗಿ ರಚನಾ ರೈ ನಾಯಕಿಯಾಗಿ ಅಭಿನಯ

Suddi Udaya

ಸಿಯೋನ್ ಆಶ್ರಮ : ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡು ಮನೆ ಸೇರಿದ ಸಂದೀಪ್ ಪರಹೈ

Suddi Udaya

ಮಂಜೊಟ್ಟಿ ಸ್ಟಾರ್‌ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಶವ ಪತ್ತೆ

Suddi Udaya

ಅಗ್ನಿವೀರ್ ಗೆ ಆಯ್ಕೆಯಾದ ಹತ್ಯಡ್ಕದ ಭರತ್‌ಗೆ ಕಪಿಲ ಕೇಸರಿ ಯುವಕ ಮಂಡಲದಿಂದ ಸನ್ಮಾನ

Suddi Udaya

ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಸವಣಾಲುವಿನ ಹಿತ್ತಿಲಪೇಲ ನಿವಾಸಿಗಳು; ಸಂಪರ್ಕ ಕೊಂಡಿಯಾಗಿರುವ ನದಿಯನ್ನೇ ದಾಟದಂತೆ ಬ್ಯಾನರ್ ಹಾಕುವ ಮೂಲಕ ಅಧಿಕಾರಿಗಳ ದಿಗ್ಬಂಧನ

Suddi Udaya
error: Content is protected !!