ಬೆಳ್ತಂಗಡಿ ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಗರಿಗಳ ಹಬ್ಬದ ಆಚರಣೆ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಗರಿಗಳ ಹಬ್ಬವನ್ನು ಆಚರಿಸಲಾಯಿತು. ಜಯಗೋಷಗಳೊಂದಿಗೆನ ಏಸುಕ್ರಿಸ್ತರ ಜೆರುಸಲೇಮ್ ಪ್ರವೇಶವನ್ನು ಗರಿಗಳ ಹಬ್ಬವೆಂದು ಆಚರಿಸಲಾಗುತ್ತದೆ.

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಅತಿ ವಂದನೀಯ ಬಿಷಫ್ ಲಾರೆನ್ಸ್ ಮುಕ್ಕುಯಿಯವರು ಆಚರಣೆಗಳ ನೇತೃತ್ವ ವಹಿಸಿದ್ದರು. ವಂದನೀಯ ಫಾದರ್ ಟೋಮಿ ಮಟ್ಟಂ , ವಂದನೀಯ ಫಾದರ್ ಲಾರೆನ್ಸ್ ಫೋನೊಲಿಲ್, ವಂದನೀಯ ಫಾದರ್ ಕುರಿಯಕೋಸ್ ಧರ್ಮ ಭಗನಿಯರು ಹಾಗೂ ವಿಶ್ವಾಸಿಗಳು ಹಬ್ಬದಲ್ಲಿ ಪಾಲ್ಗೊಂಡರು.

ಕ್ರಿಸ್ತರ ಚರಿತ್ರೆ ಪ್ರವೇಶವು ಅವರ ಸಹನ ಹಾಗೂ ಶಿಲುಬೆ ಮರಣದ ಮುನ್ನುಡಿ. ಜೆರುಸಲೇಮ್ ಪ್ರವೇಶ ಕ್ರಿಸ್ತರ ಸಹನೆ, ಮರಣ ಹಾಗೂ ಉದ್ಯಾನದ ಕಡೆಗಿನ ದಾರಿಯ ಆರಂಭ. ಜಯ ಘೋಷ ಹಾಡಿದ ಅದೇ ಜನರು ಅವರನ್ನು ಕೊಲ್ಲಲು ಅಧಿಕಾರಿಗಳನ್ನು ಒತ್ತಾಯಿಸುತ್ತಾರೆ. ಅದೇ ಜನರ ಪಾಪ ಪರಿಹಾರಕ್ಕಾಗಿ ಏಸುಕ್ರಿಸ್ತರು ಶಿಲುಬೆಗೇರಿ ಮರಣ ಹೊಂದುವರು. ಇದು ಕ್ರೈಸ್ತ ಬಾಂಧವರಿಗೆ ಪವಿತ್ರ ವಾರ.

ಯೇಸು ಕ್ರಿಸ್ತರ ಜೆರುಸಲೇಮ್ ಪ್ರವೇಶದಿಂದ ಈಸ್ಟರ್ ಆದಿತ್ಯವಾರದ ತನಕಿನ ದಿನಗಳು ಕ್ಷಮೆಯ ಕರುಣೆಯ ದೇವರ ಪ್ರೀತಿಯನ್ನು ಮನುಕುಲಕ್ಕೆ ತಿಳಿಯಪಡಿಸಿದ ದಿನಗಳಾಗಿವೆ. ಯೇಸುಕ್ರಿಸ್ತರನ್ನು ಜೆರುಸಲೇಮ್ ನಗರಕ್ಕೆ ಒತ್ತುಹೊಯ್ದ , ಏಸುಕ್ರಿಸ್ತರ ಸಂದೇಶವನ್ನು ಲೋಕಕ್ಕೆ ಸಾರಲು ಈ ಹಬ್ಬವು ಕರೆ ನೀಡುತ್ತದೆ.

Leave a Comment

error: Content is protected !!