ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya

ಇಂದಬೆಟ್ಟು: ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 28, 29, 30, 31 ರ ನೂತನ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಹಾಗೂ ವಿವಿಧ ಮೋರ್ಚಾಗಳ ಸಂಚಾಲಕರು ಸದಸ್ಯರನ್ನು ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್ ಇಂದಬೆಟ್ಟು ಹಾಗೂ ಪ್ರಭಾರಿ ಈಶ್ವರ ಬೈರ ಉಸ್ತುವಾರಿಯಲ್ಲಿ, ಬೂತ್ ಕಾರ್ಯಕರ್ತರ ಉಪಸ್ಥಿತಿಯೊಂದಿಗೆ ಆಯ್ಕೆ ಮಾಡಲಾಯಿತು.

ಬೂತ್ ಸಂಖ್ಯೆ 28ರ ಅಧ್ಯಕ್ಷರಾಗಿ ಶಶಿಧರ ಗೌಡ ಪಡೆಂಕ್ಕಲ್, ಕಾರ್ಯದರ್ಶಿಯಾಗಿ ರಕ್ಷಿತ್ ಲಿಂಗಾಂತ್ಯಾರು, ಯುವ ಮೋರ್ಚಾ ಸಂಚಾಲಕರಾಗಿ ಚಂದ್ರಶೇಖರ, ಮಹಿಳಾ ಮೋರ್ಚಾ ಸಂಚಾಲಕರಾಗಿ ಶ್ರೀಮತಿ ಸ್ಮಿತಾ ಬಾಲಕೃಷ್ಣ ಗೌಡ ಆಯ್ಕೆಯಾಗಿದ್ದಾರೆ.


ಬೂತ್ ಸಂಖ್ಯೆ 29ರ ಅಧ್ಯಕ್ಷರಾಗಿ ಸಂಜೀವ ಗೌಡ ಕುತ್ರಬೆಟ್ಟು, ಕಾರ್ಯದರ್ಶಿಯಾಗಿ ಸಚಿನ್ ಬಂಗಾಡಿ, ಯುವ ಮೋರ್ಚಾ ಸಂಚಾಲಕರಾಗಿ ವಿನಯ್ ಕುಮಾರ್ ಬೆದ್ರಬೆಟ್ಟು, ಮಹಿಳಾ ಮೋರ್ಚಾ ಸಂಚಾಲಕರಾಗಿ ಶ್ರೀಮತಿ ಹರಿಣಾಕ್ಷಿ ಆಯ್ಕೆಯಾಗಿದ್ದಾರೆ


ಬೂತ್ ಸಂಖ್ಯೆ 30ರ ಅಧ್ಯಕ್ಷರಾಗಿ ನಿತೇಶ್ ಕಡಿತ್ಯಾರು, ಕಾರ್ಯದರ್ಶಿಯಾಗಿ ಗಣೇಶ್ ಆಚಾರ್ಯ, ಯುವ ಮೋರ್ಚಾ ಸಂಚಾಲಕರಾಗಿ ಸುರಪ್ಪ ಅಂತರದಡ್ಡು, ಮಹಿಳಾ ಮೋರ್ಚಾ ಸಂಚಾಲಕರಾಗಿ ಶ್ರೀಮತಿ ಸೌಮ್ಯ ಸುರೇಂದ್ರ ಕುಕ್ಕಿಮಾರು ಆಯ್ಕೆಯಾಗಿದ್ದಾರೆ


ಬೂತ್ ಸಂಖ್ಯೆ 31ರ ಅಧ್ಯಕ್ಷರಾಗಿ ನವೀನ್ ಜೈನ್, ಕಾರ್ಯದರ್ಶಿಯಾಗಿ ಪ್ರತೀಶ್ ಕಡಿತ್ಯಾರು, ಯುವ ಮೋರ್ಚಾ ಸಂಚಾಲಕರು ಸಂತೋಷ್ ಕುಮಾರ್ ಉಂಬೆಜೆ, ಮಹಿಳಾ ಮೋರ್ಚಾ ಸಂಚಾಲಕರು ಶ್ರೀಮತಿ ಹೇಮಲತಾ ಆಯ್ಕೆಯಾಗಿದ್ದಾರೆ.


ಇಂದಬೆಟ್ಟು ಶಕ್ತಿ ಕೇಂದ್ರದಿಂದ ಬೆಳ್ತಂಗಡಿ ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷರಾಗಿ ಪಳನಿ ಸ್ವಾಮಿ ಎರ್ಮಾಳ, ತಾಲೂಕು SC ಮೋರ್ಚಾ ಸದಸ್ಯರಾಗಿ ಕು. ಹರಿಣಾಕ್ಷಿ ನೇತ್ರಾವತಿ ನಗರ ಆಯ್ಕೆಯಾಗಿದ್ದಾರೆ .

Leave a Comment

error: Content is protected !!