ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

Suddi Udaya

ಪದ್ಮುಂಜ ಸಮೀಪದ ಅಂತರದಲ್ಲಿ ರವಿಚಂದ್ರ ಶೆಟ್ಟಿ ಅಂತರ ನೂತನವಾಗಿ ನಿರ್ಮಿಸಿದ ಗೃಹ ಪ್ರವೇಶದ ಕಾರ್ಯಕ್ರಮದ ಪ್ರಯುಕ್ತ ಮಾ.25 ರಂದು ಸಂಜೆ ಇಪ್ತಾರ್ ಕೂಟ ನಡೆಯಿತು.

ಗ್ರಾಮದ ಮುಸ್ಲಿಂ ಬಾಂಧವರು ಅವರ ಆಥಿತ್ಯ ವನ್ನು ಸ್ವೀಕರಿಸಿದರು. ಇಪ್ತಾರ್ ಸಂಗಮದಲ್ಲಿ ಪದ್ಮುಂಜ ಜಮಾಅತ್ತ್ ಅಧ್ಯಕ್ಷ ರಫೀಖ್ ಅಂತರ, ಪ್ರ.ಕಾರ್ಯದರ್ಶಿ ಖಾಸಿಂ ಪದ್ಮುಂಜ, ಎಸ್.ವೈ.ಎಸ್ ಅಧ್ಯಕ್ಷ ನಝೀರ್ ಮಲೆಂಗಲ್ಲು, ಎಸ್.ಎಸ್.ಎಫ್ ಅಧ್ಯಕ್ಷ ನವಾಝ್ ಅಂತರ, ಖಲಂದರ್ ಪದ್ಮುಂಜ , ಫಾರೂಖ್ ಸಅದಿ ಪದ್ಮುಂಜ ಸಹಿತ ವಿವಿಧ ಸಂಘಟನೆಯ ನಾಯಕರು ಭಾಗವಹಿಸಿದರು.

ಖಾಸಿಂ ಪದ್ಮುಂಜ ಪ್ರಸ್ತಾವಿಕ ಮಾತುಗಳನ್ನಾಡಿ ಇದು ಸೌಹಾರ್ದತೆಯ ಭಾಂದವ್ಯ ಹೆಚ್ಚಿಸುವ ವಿಶೇಷ ಕಾರ್ಯಕ್ರಮ ಇದು ಇತರರಿಗೂ ಮಾದರಿಯಾಗಲಿ ಎಂದು ಹಾರೈಸಿ ರವಿಚಂದ್ರ ಹಾಗೂ ಅವರ ಫ್ಯಾಮಿಲಿಗೆ ಧನ್ಯವಾದ ಹೇಳಿದರು. ಸಭೆಯಲ್ಲಿ ಉದಯ ಮೇಲಂಟ, ರಮನಾತ ಶೆಟ್ಟಿ, ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!