ಸೋಮಂತ್ತಡ್ಕದಲ್ಲಿ ಶ್ರೀ ಕಟೀಲೇಶ್ವರಿ ಜನರಲ್ ಸ್ಟೋರ್ ಶುಭಾರಂಭ

Suddi Udaya

ಮುಂಡಾಜೆ: ಇಲ್ಲಿಯ ಸೋಮಂತ್ತಡ್ಕ ಸಿ.ಎ ಬ್ಯಾಂಕ್ ಶತಮಾನೋತ್ಸವ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ಕಟೀಲೇಶ್ವರಿ ಜನರಲ್ ಸ್ಟೋರ್ ಶುಭಾರಂಭವು ಮಾ.28ರಂದು ಜರುಗಿತು.

ನೂತನ ಸ್ಟೋರ್‍ ನ ಉದ್ಘಾಟನೆಯನ್ನು ಗೋಪಾಲಕೃಷ್ಣ ರಾವ್ ಅಡೂರು ರವರು ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಜನಾರ್ದನ ಗೌಡ, ಮುಂಡಾಜೆ ಗ್ರಾ.ಪಂ. ಅಧ್ಯಕ್ಷ ಗಣೇಶ್ ಬಂಗೇರ, ಮುಂಡಾಜೆ ಕೃಷಿಪತ್ತಿನ ಸಹಕಾರಿ ಸಂಘ ನಿವೃತ್ತ ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಫಡ್ಕೆ, ಮುಂಡಾಜೆ ಕೃಷಿಪತ್ತಿನ ಸಹಕಾರಿ ಸಂಘ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಚಂದ್ರಕಾಂತ ಪ್ರಭು, ಯಂಗ್ ಮುಂಡಾಜೆ ಚಾಲೆಂಜರ್ಸ್ ಸ್ಪೋಟ್ಸ್ ಕ್ಲಬ್ ಸಂಚಾಲಕರು ನಾಮ್‌ ದೇವ್ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಪ್ರಹ್ಲಾದ್ ಫಡೈ ಸೋಮಂತ್ತಡ್ಕ , ದೇವಿಗುಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪ್ರದಾನ ಅರ್ಚಕರು ಸತ್ಯನಾರಾಯಣ ಹೊಳ್ಳ , ದೇವಿಗುಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆಡಳಿತ ಮೊಕೇಸರರು ರಾಜಶೇಖರ ಭಟ್, ಅಬ್ರಹಾಂ ಜಿಸಸ್ಟ್ ಟ್ರೇಡರ್ಸ್ ಸೋಮಂತಡ್ಕ , ರವಿಂದ್ರನಾಥ ಪ್ರಭು ಪ್ರಭು ಕ್ಲಿನಿಕ್ ಸೋಮಂತಡ್ಕ , ಮುಂಡಾಜೆ ಸಿವಿಲ್ ಗುತ್ತಿಗೆದಾರರು ಮಹಮ್ಮದ್, ವಿಶ್ವನಾಥ ಶೆಟ್ಟಿ ಮುಂಡ್ರುಪ್ಪಾಡಿ, ನಾರಾಯಣ ಗೌಡ ಪಂಚಶ್ರೀ, ಹರಿಪ್ರಸಾದ್ ಭಟ್ ಹಿತ್ತಿಲಕೋಡಿ, ರಾಮಣ್ಣ ಶೆಟ್ಟಿ ಅಗರಿ ಉಪಸ್ಥಿತರಿದ್ದು, ಶುಭಹಾರೈಸಿದರು.

ಬಂದಂತಹ ಅತಿಥಿ ಗಣ್ಯರನ್ನು ಶ್ರೀಮತಿ ಮತ್ತು ಚೆನ್ನಕೇಶವ ನಾಯ್ಕ, ಅರಸಮಜಲು ಸ್ವಾಗತಿಸಿ, ಸತ್ಕರಿಸಿದರು.

Leave a Comment

error: Content is protected !!