May 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಫೇಸ್‌ ಬುಕ್‌ ಆಪ್‌ ನಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ತೆಂಕಕಾರಂದೂರು ನಿವಾಸಿ ನೆಬಿಸಾರಿಗೆ ರೂ.96,743 ವಂಚನೆ

ತೆಂಕಕಾರಂದೂರು: ಫೇಸ್‌ ಬುಕ್‌ ಆಪ್‌ ನಲ್ಲಿ Money View Personal Loan (LTD) ಆಪ್‌ ಮೂಲಕ ಅಪರಿಚಿತರು ಲೋನ್ ಕೊಡುವುದಾಗಿ ಪರಿಚಯಿಸಿಕೊಂಡಿದ್ದು ವಿವಿಧ ಹಂತದಲ್ಲಿ ರೂ 96,743 ನ್ನು ಹಣವನ್ನು‌ ಆನ್ ಲೈನ್ ಮುಲಕ ವರ್ಗಾಯಿಸಿಕೊಂಡಿದ್ದು, ಆರೋಪಿತರು ಸಾಲವನ್ನು ನೀಡದೇ, ಹಣವನ್ನು ಹಿಂತಿರುಗಿಸದೇ ವಂಚಿಸಿರುವ ಘಟನೆ ನಡೆದಿದೆ.

ತೆಂಕಕಾರಂದೂರು ನಿವಾಸಿ ಶ್ರೀಮತಿ ನೆಬಿಸಾ (38) ಎಂಬವರ ದೂರಿನಂತೆ, ಮಾ.21 ರಂದು ಪಿರ್ಯಾದಿದಾರರಿಗೆ ಪೇಸ್‌ ಬುಕ್‌ ಆಪ್‌ ನಲ್ಲಿ Money View Personal Loan (LTD) ಆಪ್‌ ಮೂಲಕ, ಅಪರಿಚಿತ ಆರೋಪಿತರು ಪರಿಚಯಿಸಿಕೊಂಡಿದ್ದು, ನೆಬಿಸಾ ಲೋನ್ ಬಗ್ಗೆ ಆರೋಪಿತರಿಂದ ಮಾಹಿತಿ ಪಡೆದು 5 ಲಕ್ಷ ಲೋನ್‌ ಪಡೆಯುವರೇ ಆರೋಪಿತರಿಗೆ ದಾಖಲೆ ಪತ್ರಗಳನ್ನು ಕಳುಹಿಸಿರುತ್ತಾರೆ.

ಬಳಿಕ ಆರೋಪಿತರು ಪೋನ್‌ ಮೂಲಕ ಸಂಪರ್ಕಿಸಿ, ಮಾ. 28 ರ ತನಕ ವಿವಿಧ ಹಂತದಲ್ಲಿ ಒಟ್ಟು ರೂ 96,743 ನ್ನು ಹಣವನ್ನು‌ ಆನ್ ಲೈನ್ ಮುಲಕ ವರ್ಗಾಯಿಸಿಕೊಂಡಿದ್ದು, ಆರೋಪಿತರು ನೆಬಿಸಾರವರಿಗೆ ಸಾಲವನ್ನು ನೀಡದೇ, ಹಣವನ್ನು ಹಿಂತಿರುಗಿಸದೇ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ 35/2024 ಕಲಂ: 66 (C), (D) IT Act & ಕಲಂ: 417,420 IPC ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ/ ಉಪಾಧ್ಯಕ್ಷರ ಆಯ್ಕೆ

Suddi Udaya

ಮಿತ್ತಬಾಗಿಲು:ಹರ್ಝತ್ ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ

Suddi Udaya

ಬಳಂಜ ಸುವರ್ಣ ನಿಲಯದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಸಹಾಯಕ ಆಯುಕ್ತರ ಕಚೇರಿಗೆ ಹಾಜರಾಗುವ ಮುನ್ನ ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ಆಶ್ರಯದಲ್ಲಿ ಕೆಸರ್ ಕಂಡೊಡು ವಕೀಲೆರ್ನ ಗೊಬ್ಬು

Suddi Udaya

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಶಿಬಿರಕ್ಕೆ ಸುಲ್ಕೇರಿಯ ಶಶಿಕಾಂತ್ ಆಯ್ಕೆ

Suddi Udaya
error: Content is protected !!