28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಾರತ್ ಸ್ಕೌಟ್ಸ್ & ಗೈಡ್ಸ್ ವತಿಯಿಂದ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆ

ಧರ್ಮಸ್ಥಳ : ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆಯನ್ನು ಆಚರಿಸಲಾಯಿತು.

ವಿಶ್ವ ಸ್ಕಾರ್ಫ್ ದಿನಾಚರಣೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಪರಿಮಳ ಎಂ.ವಿ ಇವರಿಗೆ ಸ್ಕಾರ್ಫ್ ತೊಡಿಸಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಶಾಲಾ ಕಬ್ ಮಾಸ್ಟರ್ ಶ್ರೀಮತಿ ಅಮೃತಾ ವಿ.ಶೆಟ್ಟಿ ಇವರು ಸ್ಕಾರ್ಫ್ ದಿನದ ಮಹತ್ವ ವಿವರಿಸಿದರು. ಬಳಿಕ ಬನ್ನಿ ವಿದ್ಯಾರ್ಥಿಗಳಿಗೆ ಏಪ್ರಾನ್ ತೊಡಿಸಿ, ಹೊಸದಾಗಿ ಸೇರ್ಪಡೆಗೊಂಡ ಕಬ್ ಬುಲ್ ಬುಲ್ ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ತೊಡಿಸಿ ಸ್ವಾಗತಿಸಲಾಯಿತು.

ಕಬ್ ಮಾಸ್ಟರ್ ಶ್ರೀಮತಿ ಹೇಮಾವತಿ ಕಬ್ ಹಾಗೂ ಬುಲ್ ಬುಲ್ ಪ್ರತಿಜ್ಞೆ ಹಾಗೂ ನಿಯಮ ಹೇಳಿದರು.ಸ್ಕೌಟ್ ಮಾಸ್ಟರ್ ಶ್ರೀಮತಿ ಶಶಿಕಲಾ ಸ್ಕೌಟ್ ಪ್ರತಿಜ್ಞೆ ಅನ್ನು ಬೋಧಿಸಿದರು. ಗೈಡ್ ಕ್ಯಾಪ್ಟನ್ ಶ್ರೀಮತಿ ದೀಕ್ಷಾ ನಿಯಮ ಬೋಧಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರು ಮಾತನಾಡುತ್ತಾ ಸ್ಕಾರ್ಫ್ ಮಹತ್ವ ಉದ್ದೇಶ ,ಸಮವಸ್ತ್ರದ ಮಹತ್ವ ಹಾಗೂ ಅದನ್ನು ಧರಿಸುವವರ ಕೆಲಸ ಕಾರ್ಯಗಳು ಜವಾಬ್ದಾರಿ,ಅದನ್ನು ನಿಭಾಯಿಸಬೇಕಾದ ಅಗತ್ಯತೆ ಹಾಗೂ ನಿರ್ವಹಿಸುವ ರೀತಿ ಹೇಗಿರಬೇಕು ಎಂಬುದನ್ನು ವಿವರಿಸಿದರು. ಕಾರ್ಯಕ್ರಮವನ್ನು ಕಬ್ ಮಾಸ್ಟರ್ ಶ್ರೀಮತಿ ಅಮೃತಾ ವಿ ಶೆಟ್ಟಿ ನಿರ್ವಹಿಸಿ, ಕಬ್ ವಿದ್ಯಾರ್ಥಿ ವಿಹಾನ್ ಮಯ್ಯ ಸ್ವಾಗತಿಸಿ,ಕಬ್ ವಿದ್ಯಾರ್ಥಿ ಅಚಿಂತ್ಯ ಧನ್ಯವಾದವಿತ್ತರು.

Related posts

ಉಜಿರೆ: ಶ್ರೀ ಧ.ಮಂ.ಮಹಿಳಾ ಐಟಿಐಯಲ್ಲಿ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರಿಂದ ದಿ| ಎಂ.ವೈ ಹರೀಶ್ ರವರ ಭಾವಚಿತ್ರಕ್ಕೆ ಪುಷ್ಪ ನಮನ

Suddi Udaya

ಪತಿಯೊಂದಿಗೆ ಕೋಪಗೊಂಡು ಆತ್ಮಹತ್ಯೆಗೆ ಯತ್ನ: ನದಿ ಹಾರಲು ಯತ್ನಿಸಿದ ಮಹಿಳೆಯ ಜೀವ ಕಾಪಾಡಿದ ಸಾಕು ನಾಯಿ

Suddi Udaya

ಕಲ್ಮಂಜ : ನಿವೃತ್ತ ಆರೋಗ್ಯ ಇಲಾಖೆಯ ಅಧಿಕಾರಿ ಜಗನ್ನಾಥ್ ಪೂಜಾರಿ ನಿಧನ

Suddi Udaya

ತೋಟತ್ತಾಡಿ : ವಿ. ಒ. ಜೋಸೆಫ್ ಕುರುಪ್ಪನಾಟ್ ನಿಧನ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ನಂದಕುಮಾರ್ ಅವರಿಗೆ ಸಂತಾಪ ಸೂಚಕ ಸಭೆ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಮಲವಂತಿಗೆ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya
error: Content is protected !!