22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಕಾರ್ಯ

ಬೆಳ್ತಂಗಡಿ: ಸದಾ ಸೇವೆಯಲ್ಲಿ ತನ್ನನ್ನು ತಾನು ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವ ವಿಭಿನ್ನ ಶೈಲಿಯ ಸಾಮಾಜಿಕ ಶೈಕ್ಷಣಿಕ ಕ್ರೀಡಾ ಶಿಕ್ಷಣ ಕೆಲಸಗಳಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ರಾಜ ಕೇಸರಿ ಸಂಘಟನೆಯ 547 ಸೇವಾ ಯೋಜನೆ ಪ್ರಯುಕ್ತ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಲೀಲಾವತಿ ಅವರ ಹೊಸ ಮನೆ ಮೈರಾರು ಓಡಿಲ್ನಾಳ ಇವರ ಮನೆಯ ವೈರಿಂಗ್ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು. ಅದನ್ನು ಪೂರ್ಣಗೊಳಿಸಿ ಇವತ್ತು ಅವರಿಗೆ ಹಸ್ತಾಂತರಿಸಲಾಯಿತು.


ಮನೆಯ ಸಂಪೂರ್ಣ ವೈರಿಂಗ್ ಕೆಲಸ ಮತ್ತು ಖರ್ಚು ವೆಚ್ಚಗಳನ್ನು ಲೋಬೊ ಟವರ್ಸ್ ನಲ್ಲಿರುವ ಗಣೇಶ್ ಎಲೆಕ್ಟ್ರಿಕಲ್ಸ್ ಕೆ ಬಿ ರೋಡ್. ಇದರ ಮಾಲಕರಾದ ಯಜ್ಞೇಶ್ ರೈ .. ಇವರ ಉಚಿತವಾಗಿ ಮಾಡಿಕೊಟ್ಟಿದ್ದಾರೆ. ಈ ದಿನದ ಹುಟ್ಟುಹಬ್ಬವನ್ನು ಲೀಲಾವತಿಯವರ ಹೊಸ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆ ಗೌರವ ಸಲಹೆಗಾರರಾದ ಪ್ರೇಮ್ ರಾಜ್ ರೋಷನ್, ರಾಜ ಕೇಸರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್ ಗುರುವಾಯನಕೆರೆ, ಸದಸ್ಯರುಗಳಾದ ದೇವರಾಜ್, ಸಂದೇಶ್, ಶ್ರೀನಿವಾಸ್ ಮಂಜೊಟ್ಟಿ ಉಪಸ್ಥಿತರಿದ್ದರು

Related posts

ವೇಣೂರು ನಡ್ತಿಕಲ್ಲು ನಿವಾಸಿ ಇಸ್ಮಾಯಿಲ್ ಮುಸ್ಲಿಯಾರ್ ನಿಧನ

Suddi Udaya

ಸವಣಾಲು: ಮಹಾಬಲ ಭಂಡಾರಿ ನಿಧನ

Suddi Udaya

ವಿ.ಪ. ಮಾಜಿ ಶಾಸಕ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ರವರ ಮುತುವರ್ಜಿಯಿಂದ ಸರಕಾರದ ವಿಶೇಷ ರೂ.50 ಲಕ್ಷ ಅನುದಾನದಿಂದ ಗೇರುಕಟ್ಟೆ – ಹೇರೋಡಿ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ

Suddi Udaya

ಗುರುವಾಯನಕೆರೆ- ಶಕ್ತಿನಗರ ನಗರಲಂಕಾರ ದೀಪ ಲೋಕಾರ್ಪಣೆ

Suddi Udaya

ಶಾಸಕ ಹರೀಶ್ ಪೂಂಜರಿಗೆ ಕರ್ನಾಟಕ ಟಿವಿ “ಲೀಡರ್ ಅವಾರ್ಡ್ಸ್”

Suddi Udaya

ಉಜಿರೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಸರಕಾರಿ ಬಸ್ಸು

Suddi Udaya
error: Content is protected !!