ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏಕಾಹ ಭಜನಾ ಮಹೋತ್ಸವ

Suddi Udaya

ಕೊರಿಂಜ : ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏಕಾಹ ಭಜನಾ ಮಹೋತ್ಸವ ಕಾರ್ಯಕ್ರಮವನ್ನು ವಿಜಯ ಕುಮಾರ್ ತಂತ್ರಿಗಳು ದೀಪ ಪ್ರಜ್ವಲನೆ ಮಾಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಧರ್ಣಪ್ಪ ಗೌಡ ಬಾನಡ್ಕ ಹಾಗೂ ಸುರೇಶ್ ನಾಯ್ಕ ಹಲೇಜಿ, ಪ್ರಗತಿ ಬಂಧು ಒಕ್ಕೂಟದ ಕಣಿಯೂರು ವಲಯದ ವಲಯಾಧ್ಯಕ್ಷ ರಾಜ್ ರಮಾನಂದ ಪೂಜಾರಿ ಮೊಗೆರೋಡಿ, ದೇವಸ್ಥಾನದ ಅರ್ಚಕರಾದ ಕಾರ್ತಿಕ್ ಭಟ್ ಹಾಗೂ ಗೋವಿಂದ ಭಟ್ ಮತ್ತು ಸಹ‌ ಮೊಕ್ತೇಸರರಾದ ಸೇಸಪ್ಪ ರೈ ಕೊರಿಂಜ ಉಪಸ್ಥಿತರಿದ್ದರು.

ಸಹ ಮೊಕ್ತೇಸರರಾದ ಸೀತಾರಾಮ ಆಳ್ವ ಕೊರಿಂಜ ಸ್ವಾಗತಿಸಿ ಧನ್ಯವಾದವಿತ್ತರು. ನಂತರ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಕೊರಿಂಜ ಹಾಗೂ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಕಾರಿಂಜ ಇವರ ಭಜನಾ ಕಾರ್ಯಕ್ರಮದೊಂದಿಗೆ ಭಜನಾ ಕಾರ್ಯಕ್ರಮವನ್ನು ಮಾಡಲಾಯಿತು.

Leave a Comment

error: Content is protected !!