ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ರಾಜ್‌ಎಂಟರ್‌ಪ್ರೈಸಸ್ ಸೈಬರ್ ಸೆಂಟರ್ ಶುಭಾರಂಭ

Suddi Udaya

ಬೆಳ್ತಂಗಡಿ: ಇಲ್ಲಿಯ ಸುವರ್ಣ ಆರ್ಕೇಡ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಮೋದಿಕೇರ್ ಸಂಸ್ಥೆಯಲ್ಲಿ ಇದೀಗ ರಾಜ್‌ಎಂಟರ್‌ಪ್ರೈಸಸ್ ಸೈಬರ್ ಸೆಂಟರ್ ಯುಗಾದಿಯ ಶುಭದಿನ ಎ.10 ರಂದು ಶುಭಾರಂಭಗೊಂಡಿತು.


ಉದ್ಘಾಟನೆಯನ್ನು ಕಟ್ಟಡದ ಮಾಲಕರಾದ ವೈ ನಾಣ್ಯಪ್ಪ ಪೂಜಾರಿ ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಉಡುಪಿ ಸ್ಪೋರ್ಟ್ಸ್ ಸಂಸ್ಥೆಯ ಮಾಲಕ ಪ್ರಜ್ವಲ್, ಮೋದಿಕೇರ್ ಕ್ರೌನ್ ಡೈಮಂಡ್ ಡೈರೆಕ್ಟರ್ ತಾರನಾಥ್ ಪುತ್ತೂರು, ಮಾರೂರು ಮೋಟಾರ್‍ಸ್‌ನ ವಸಂತ್ ಉಪಸ್ಥಿತರಿದ್ದರು.

ಮಾಲಕರಾದ ಪುಷ್ಪರಾಜ್ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು. ಮಾಲಕರ ಹಿತೈಷಿಗಳು, ಬಂಧುಗಳು ಮತ್ತಿತರರು ಉಪಸ್ಥಿತರಿದ್ದರು.

Leave a Comment

error: Content is protected !!