ಕನ್ಯಾಡಿಯಲ್ಲಿ ಜನಾರ್ದನ ರೆಸಿಡೆನ್ಸಿ ಉದ್ಘಾಟನೆ

Suddi Udaya

ಧರ್ಮಸ್ಥಳ: ಕನ್ಯಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ವಸತಿಗೃಹ ಜನಾರ್ದನ ರೆಸಿಡೆನ್ಸಿ ಇದರ ಉದ್ಘಾಟನಾ ಸಮಾರಂಭವು ಎ.12 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾ0ಬಿಕ ದೇವಸ್ಥಾನದ ಅರ್ಚಕ ಗಜಾನನ ಜೋಶಿ ದೀಪ ಬೆಳಗಿಸಿ ಶುಭಹಾರೈಸಿದರು.
ಕಟ್ಟಡ ಉದ್ಘಾಟನೆಯನ್ನು ಕಕ್ಕಿಂಜೆ ಶ್ರೀ ಕೃಷ್ಣ ನರ್ಸಿಂಗ್ ಹೋಂ ನ ಡಾ| ಮುರಳಿಕೃಷ್ಣ ಇರ್ವತ್ರಾಯ ನೆರವೇರಿಸಿದರು.


ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ರಾಮಕೃಷ್ಣ ಕಲ್ಲೂರಾಯರು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಗಿರೀಶ ಕುದ್ರೆಂತಾಯ ಧರ್ಮಸ್ಥಳ, ಶ್ರೀ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಕುಮಾರ ಬೈಪಾಡಿತ್ತಾಯ, ಲಕ್ಷ್ಮಣ ಸಪಲ್ಯ ಉದ್ಯಮಿ ಉಜಿರೆ ಭಾಗವಹಿಸಿ ಶುಭಾಹಾರೈಸಿದರು.

ಮಾಲಕರಾದ ಶ್ರೀಮತಿ ಸುಮಾ ಮತ್ತು ರಾಘವೇಂದ್ರ ಬೈಪಾಡಿತ್ತಾಯ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕೃಷ್ಣ ಆಚಾರ್ಯ ನಿರೂಪಿಸಿದರು.

Leave a Comment

error: Content is protected !!