ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನಕ್ಕೆ ಶಿಲಾನ್ಯಾಸ

Suddi Udaya

ಕೊಕ್ಕಡ: ಇಲ್ಲಿಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಸಂಘದ ಸಮುದಾಯ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಎ.14 ರಂದು ನೆರವೇರಿಸಲಾಯಿತು.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಈ ಸುಬ್ರಹ್ಮಣ್ಯ ತೊಡ್ತಿಲ್ಲಾಯ ಇವರು ಶಿಲಾನ್ಯಾಸ ಕಾರ್ಯಕ್ರಮದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತೃ ಸಂಸ್ಥೆ ಬೆಳ್ತಂಗಡಿ ಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪಗೌಡ ಪೂವಾಜೆ, ಮಾತೃ ಸಂಘದ ಕಾರ್ಯದರ್ಶಿಗಳಾದ ಗಣೇಶ್ ಗೌಡ ಬರೆಮೇಲು ಕಡಿರುದ್ಯಾವರ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಕಲಾಯಿ, ಸಂಘದ ಗ್ರಾಮ ಸಮಿತಿಯ ಅಧ್ಯಕ್ಷ ಜಯಂತಗೌಡ ಅಡೀಲು, ಕಾರ್ಯದರ್ಶಿ ಪ್ರಶಾಂತ್ ಗೌಡ ಪೂವಾಜೆ, ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಮಿತಿಯ ಸದಸ್ಯರುಗಳು, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಹಿಳಾ ಸಮಿತಿಯ ಅಧ್ಯಕ್ಷ ಶೋಭಾ ನಾರಾಯಣಗೌಡ, ಹಾಗೂ ಮಹಿಳಾ ಸಂಘದ ಎಲ್ಲಾ ಸಮಿತಿಯ ಸದಸ್ಯರುಗಳು, ನಿಕಟ ಪೂರ್ವ ಗ್ರಾಮ ಸಮಿತಿಯ ಅಧ್ಯಕ್ಷ ಶಿವಾನಂದ ಗೌಡ ಸಂಕೇಶ, ನಾರಾಯಣಗೌಡ, ಕುಂಜಪ್ಪ ಗೌಡ, ಡಾ. ಮೋಹನ್ ದಾಸ್ ಗೌಡ, ರಾಮಣ್ಣಗೌಡ ಕೇಚೋಡಿ. ದಾಮೋದರ ಗೌಡ, ಗ್ರಾಮ ಗೌಡರಾದ ಬಾಲಕೃಷ್ಣ ಗೌಡ ಕೆಂಗುಡೇಲು, ರಾಮಣ್ಣ ಗೌಡ ಮುನ್ನಡ್ಕ, ವಾಸುದೇವ ಗೌಡ ಅಗರ್ಥ, ಚಂದ್ರಶೇಖರಗೌಡ ಗಣಗಿರಿ, ಕುಶಾಲಪ್ಪ ಗೌಡ ಪೊಡಿಕೆತ್ತೂರು, ರಾಮಣ್ಣ ಗೌಡ ಹಿಬಾರ, ಸ್ಥಳೀಯರು ಹಾಗೂ ಸಂಘದ ಹಿತೈಷಿ ಕೆ ವಿ ಭಟ್ ಹಳ್ಳಿoಗೇರಿ, ಸುಂದರ ಗೌಡ ಕೆಂಗುಡೇಲು, ಸುಂದರ ಗೌಡ ಹಳ್ಳಿಂಗೇರಿ ಉಪಸ್ಥಿತರಿದ್ದರು.

Leave a Comment

error: Content is protected !!