24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ: ತೆಂಕುಬೈಲು ಪತ್ತನಾಜೆಯ ವಾರ್ಷಿಕ ನೇಮೋತ್ಸವದ ಪೂರ್ವಭಾವಿ ಸಭೆ ಹಾಗೂ ಸೇವಾ ಸಮಿತಿ ರಚನೆ

ಕೊಕ್ಕಡ: ಇಲ್ಲಿಯ ತೆಂಕುಬೈಲು ಪತ್ತನಾಜೆಯ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಹಾಗೂ ನೂತನ ಸಮಿತಿಯ ರಚನೆಯು ಸೇವಾ ಸಮಿತಿಯು ಆಡಳಿತದಾರರಾದ ವಿಶ್ವನಾಥ ಗೌಡ ತೆಂಕುಬೈಲು ಇವರ ನೇತೃತ್ವದಲ್ಲಿ ಎ.13ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ನೂತನ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ದಾಮಣ್ಣ ಗೌಡ ಡೆಚ್ಚಾರು, ಅಧ್ಯಕ್ಷರಾಗಿ ಗಣೇಶ ಗೌಡ ಕಲಾಯಿ, ಉಪಾಧ್ಯಕ್ಷರಾಗಿ ವಿಶ್ವನಾಥ ಕಕ್ಕುದೋಳಿ, ಕಾರ್ಯದರ್ಶಿಯಾಗಿ ನಾರಾಯಣ ಗೌಡ ತೆಂಕುಬೈಲು, ಉಪಕಾರ್ಯದರ್ಶಿಗಳಾಗಿ ವಿಠಲ ಕುರ್ಲೆ ಮತ್ತು ಶ್ರೀಮತಿ ಜಯಶ್ರೀ ತೆಂಕುಬೈಲು, ಕೋಶಾಧಿಕಾರಿಯಾಗಿ ವಸಂತ ಪಿತ್ತಲಕೋಡಿ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳಾಗಿ ಕ್ಯಾಪ್ಟನ್ ನಾಗೇಶ್ ಕುರ್ಲಾಜೆ, ಬಾಬು ತೆಂಕುಬೈಲು, ಡೊಗ್ರ ಗೌಡ ಮುಂಡೂರುಪಳಿಕ್ಕೆ, ಪ್ರಸನ್ನ ಗೌಡ ತೆಂಕುಬೈಲು, ಲೇಖಾನಂದ ಗೌಡ ಬಾಲ್ತಿಮಾರು ಇವರುಗಳನ್ನು ಆಯ್ಕೆ ಮಾಡಲಾಯಿತು.

ನಂತರ ನೇಮೋತ್ಸವದ ವ್ಯವಸ್ಥೆಗಾಗಿ ಕೆಲವು ಉಪ ಸಮಿತಿಯನ್ನು ರಚಿಸಲಾಯಿತು. ಮೇ 23 ರಂದು ಕಲ್ಕುಡ- ಕಲ್ಲುರ್ಟಿ ಮತ್ತು ಪಂಜುರ್ಲಿ-ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಮೇ 24 ರಂದು ಪಿಲಿಚಾಮುಂಡಿ ದೈವಕ್ಕೆ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

Related posts

ಚೈತನ್ಯ ಸಂಜೀವಿನಿ ಮಹಿಳಾ ಒಕ್ಕೂಟ ಸುಲ್ಕೇರಿ ಗ್ರಾ.ಪಂ. ಸಹಭಾಗಿತ್ವದಲ್ಲಿ ಚೈತನ್ಯ ಹಾಳೆ ತಟ್ಟೆ ಉತ್ಪಾದನೆಯ ಉದ್ಘಾಟನೆ

Suddi Udaya

ಬೂಡುಜಾಲು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಜು.26: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ “ಕಾರ್ಗಿಲ್ ವಿಜಯ ದಿವಸ್” ಪಂಜಿನ ಮೆರವಣಿಗೆ

Suddi Udaya

ಬೆಳ್ತಂಗಡಿ ಮಹಿಳಾ ಜೆಸಿ ವಿಭಾಗದಿಂದ ಧ್ವನಿವರ್ಧಕ ಕೊಡುಗೆ

Suddi Udaya

ಕನ್ಯಾಡಿ ಶ್ರೀ ಗುರುದೇವ ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಮುಳಿಯ ಜುವೆಲ್ಸ್ ನಲ್ಲಿ “ಕನ್ನಡ ಬದುಕು ಬಂಗಾರ” ಕಾರ್ಯಕ್ರಮ

Suddi Udaya
error: Content is protected !!