ಕೊಯ್ಯೂರು ಮೈಂದಕೋಡಿ ಮನೆಯಲ್ಲಿ ಭಜನಾ ಕಮ್ಮಟ ಹಾಗೂ ದೈವಗಳ ಗಗ್ಗರ ಸೇವೆ

Suddi Udaya

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಮೈಂದಕೋಡಿ ಮನೆಯಲ್ಲಿ ಕಮ್ಮಟ ಭಜನೆ ಹಾಗೂ ಸತ್ಯ ದೇವತೆ ಮತ್ತು ಇತರ ದೈವಗಳ ನೇಮೋತ್ಸವ ಎ.14 ರಂದು ರಾತ್ರಿ ವಿಜೃಂಭಣೆಯಿಂದ ಜರುಗಿತು.


ನಾರಾಯಣ ಗೌಡ ಮತ್ತು ದಂಪತಿಗಳ ಹಲವು ದಿನದ ಕನಸು ಧಾರ್ಮಿಕ ಆಶಯದಂತೆ ಮನೆಯಲ್ಲಿ ಕೊಯ್ಯೂರು ಸ್ಥಳೀಯ ಮಕ್ಕಳ, ಮಹಿಳಾ ಮತ್ತು ಪುರುಷರ 6 ಭಜನಾ ತಂಡದಿಂದ ಏಕಕಾಲಕ್ಕೆ ಕುಣಿತ ಭಜನೆ ಯಶಸ್ವಿಯಾಗಿ ನಡೆಯಿತು.
ಕಾಣಿಯೂರು ಚಾರ್ವಕ ಶ್ರೀಮತಿ ಯಶೋಧ ಎ.ಹಾಗೂ ಜಯಂತ ವೈ ಪುತ್ರರಾದ ಸಾಕ್ಷಾತ್ ವೈ.ಜೆ.ಶಿವಜಿತ್ ವೈ.ಜೆ ಭಜನೆ ಹಾಡುವ ಜೊತೆಗೆ ತಾಳ, ಹಾರ್ಮೋನಿಯಂ ನುಡಿಸುವ ಮೂಲಕ ಭಜನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು.
ನಂತರ ಮನೆಯ ಸತ್ಯದೇವತೆ ಹಾಗೂ ಇನ್ನಿತರ ದೈವಗಳ ನೇಮೋತ್ಸವ ನಡೆಯಿತು.

ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಪಿ ಚಂದ್ರಶೇಖರ್ ಸಾಲಿಯಾನ್ ಕೊಯ್ಯೂರು ಮತ್ತು ಭಜನಾ ತರಬೇತುದಾರರಾದ ವಿ.ಹರೀಶ್ ನೆರಿಯ ಸಹಕಾರದೊಂದಿಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಮ್ಮಟೋತ್ಸವ ಮೆಚ್ಚುಗೆ ಪಡೆಯಿತು.

Leave a Comment

error: Content is protected !!