September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಮೈಂದಕೋಡಿ ಮನೆಯಲ್ಲಿ ಭಜನಾ ಕಮ್ಮಟ ಹಾಗೂ ದೈವಗಳ ಗಗ್ಗರ ಸೇವೆ

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಮೈಂದಕೋಡಿ ಮನೆಯಲ್ಲಿ ಕಮ್ಮಟ ಭಜನೆ ಹಾಗೂ ಸತ್ಯ ದೇವತೆ ಮತ್ತು ಇತರ ದೈವಗಳ ನೇಮೋತ್ಸವ ಎ.14 ರಂದು ರಾತ್ರಿ ವಿಜೃಂಭಣೆಯಿಂದ ಜರುಗಿತು.


ನಾರಾಯಣ ಗೌಡ ಮತ್ತು ದಂಪತಿಗಳ ಹಲವು ದಿನದ ಕನಸು ಧಾರ್ಮಿಕ ಆಶಯದಂತೆ ಮನೆಯಲ್ಲಿ ಕೊಯ್ಯೂರು ಸ್ಥಳೀಯ ಮಕ್ಕಳ, ಮಹಿಳಾ ಮತ್ತು ಪುರುಷರ 6 ಭಜನಾ ತಂಡದಿಂದ ಏಕಕಾಲಕ್ಕೆ ಕುಣಿತ ಭಜನೆ ಯಶಸ್ವಿಯಾಗಿ ನಡೆಯಿತು.
ಕಾಣಿಯೂರು ಚಾರ್ವಕ ಶ್ರೀಮತಿ ಯಶೋಧ ಎ.ಹಾಗೂ ಜಯಂತ ವೈ ಪುತ್ರರಾದ ಸಾಕ್ಷಾತ್ ವೈ.ಜೆ.ಶಿವಜಿತ್ ವೈ.ಜೆ ಭಜನೆ ಹಾಡುವ ಜೊತೆಗೆ ತಾಳ, ಹಾರ್ಮೋನಿಯಂ ನುಡಿಸುವ ಮೂಲಕ ಭಜನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು.
ನಂತರ ಮನೆಯ ಸತ್ಯದೇವತೆ ಹಾಗೂ ಇನ್ನಿತರ ದೈವಗಳ ನೇಮೋತ್ಸವ ನಡೆಯಿತು.

ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಪಿ ಚಂದ್ರಶೇಖರ್ ಸಾಲಿಯಾನ್ ಕೊಯ್ಯೂರು ಮತ್ತು ಭಜನಾ ತರಬೇತುದಾರರಾದ ವಿ.ಹರೀಶ್ ನೆರಿಯ ಸಹಕಾರದೊಂದಿಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಮ್ಮಟೋತ್ಸವ ಮೆಚ್ಚುಗೆ ಪಡೆಯಿತು.

Related posts

ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಳಂಜ ಶಾಲಾ ಮಕ್ಕಳಿಗೆ ಐಡಿ ಕಾರ್ಡ್ ಹಾಗೂ ಬೆಲ್ಟ್ ವಿತರಣೆ

Suddi Udaya

ಪಡಂಗಡಿಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya

“ನಮ್ಮ ಜವನೆರ್ ವಾಟ್ಸಪ್ ಗ್ರೂಪ್ ಅಳದಂಗಡಿ” ಹಾಗೂ “ಪಬ್ ಜಿ “ಗ್ರೂಪಿನ ಸದಸ್ಯರಿಂದ ಸಹಾಯಧನ ಹಸ್ತಾಂತರ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಕಾಶಿಪಟ್ಣ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಬೆಳಾಲು ಶ್ರೀ ಧ. ಮಂ.ಪ್ರೌಢಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಬುರುಡೆ ಪ್ರಕರಣ ವರದಿಯ ಆದೇಶ ಮತ್ತೆ ಜ.3ಕ್ಕೆ ಮುಂದೂಡಿದ ಕೋರ್ಟ್

Suddi Udaya
error: Content is protected !!