24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ಪವ‌ರ್ ಆನ್ ಸಂಸ್ಥೆಯಲ್ಲಿ ಲಕ್ಕಿ ಸ್ಟಾರ್‌ನ 3ನೇ ಹಂತದ ಡ್ರಾ ಅದೃಷ್ಟವಂತ ಯೋಜನೆಯಲ್ಲಿ ಗ್ರಾಹಕರು ಪಡೆದರು ದ್ವಿಚಕ್ರ ವಾಹನ ಡ್ಯಾನ್ಸ್ ಟು ಡ್ಯಾನ್ಸ್ ಆನ್ ಲೈನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ: ತಾಲೂಕಿನ ಪ್ರಸಿದ್ದ ಹಾಗೂ ಪ್ರಾಮಾಣಿಕ ಸಂಸ್ಥೆಯಾಗಿ ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿದ ಪವ‌ರ್ ಆನ್ ಸಂಸ್ಥೆಯಲ್ಲಿ ಲಕ್ಕಿ ಸ್ಟಾರ್‌ನ 3ನೇ ಹಂತದ ಡ್ರಾ ಏ.15ರಂದು ಮಧ್ಯಾಹ್ನ ನಡೆಯಿತು.

ಉದ್ಘಾಟನೆಯನ್ನು ಕಟ್ಟಡದ ಮಾಲಕರಾದ ರಾಮದಾಸ್ ಪೈ ನೆರೆವೇರಿಸಿದರು ಮತ್ತು ಡ್ರಾವನ್ನು ಲೋಬೋ ಟಿ.ವಿ.ಎಸ್ ಮಾಲಕರಾದ ರೋನಾಲ್ಡ್ ಲೋಬೋ ನೆರೆವೇರಿಸಿದರು.

ಮೂರನೇ ನೇ ಹಂತದ ಡ್ರಾದಲ್ಲಿ ನಂಬರ್ 2189 ಪ್ರಣಿವಿ ಕೆದ್ದು ನೀಲಿ ಬಣ್ಣದ ಟಿ.ವಿ.ಎಸ್.ಸ್ಕೂಟರ್ ಲಭಿಸಿದೆ.ಪವರ್ ಆನ್‌ಸಂಸ್ಥೆ ವತಿಯಿಂದ ಡ್ಯಾನ್ಸ್‌ ಟು ಡ್ಯಾನ್ಸ್ ಎಂಬ ಅನ್ ಲೈನ್ ಸ್ಪರ್ಧೆಯನ್ನು ಏರ್ಪಡಿಸಿದ್ದರು ಅದರಲ್ಲಿ ಅತೀ ಹೆಚ್ಚು ಲೈಕ್ಸ್ ಬಂದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಬಹುಮಾನ ಅರ್ಚನಾ ಕಡಬ, ಅರ್ಶಿಕಾ ಪೂಜಾರಿ ಬಂಟ್ವಾಳ, ದ್ವಿತೀಯ ಬಹುಮಾನ ಸಾನಿಧ್ಯ ಉಜಿರೆ, ತೃತೀಯ ಬಹುಮಾನ ರಮ್ಯಾ ಉಪ್ಪಿನಂಗಡಿ ಮತ್ತು ವೈಷ್ಣವಿ ಉಜಿರೆ ಪಡೆದರು.30ನೇ ತಾರೀಕಿನ ಒಳಗೆ ಕಂತನ್ನು ಕಟ್ಟಿದ್ದವರಿಗೆ ಒಂದು ವಿಶೇಷ ಬಹುಮಾನ ಕೂಡ ಸಿಕ್ಕಿತ್ತು.ಇನ್ನೂ 10ನೇ ತಾರೀಕು ಒಳಗೆ ಕಂತನ್ನು ಕಟ್ಟಿದ್ದವರಿಗೆ ಚಿನ್ನದ ನಾಣ್ಯ ಬಹುಮಾನ ಕೂಡ ಸಿಕ್ಕಿತು.

ಲೋಬೋ ಟಿ.ವಿ.ಎಸ್.ಮಾಲಕ ರೋನಾಲ್ಡ್ ಲೋಬೋ ಮಾತನಾಡಿ ಪವ‌ರ್ ಆನ್ ಸಂಸ್ಥೆ ಬೆಳ್ತಂಗಡಿಯಲ್ಲಿ ಪ್ರಸಿದ್ಧವಾದ ಸಂಸ್ಥೆಯಾಗಿದೆ.

ಶೀತಲ್ ಜೈನ್‌ರವರು ತುಂಬಾ ಶ್ರಮ ಪಟ್ಟಿದ್ದಾರೆ.ತುಂಬಾ ಕಷ್ಟಪಟ್ಟು ಉದ್ಯಮವನ್ನು ಬೆಳೆಸಿದ್ದಾರೆ. ಅವರು ತುಂಬಾ ಸೇವೆಯನ್ನು ಮಾಡುತ್ತಾರೆ. ಅವರ ಹತ್ತಿರ ಏನಾದರೂ ಹೇಳಿದರೆ ತಕ್ಷಣ ಸ್ಪಂದಿಸುತ್ತಾರೆ ಎಂದರು.

ಪವರ್ ಆನ್ ಸಂಸ್ಥೆಯ ಮಾಲಕ ಶೀತಲ್ ಜೈನ್ ಎಲ್ಲರನ್ನು ಸ್ವಾಗತಿಸಿದರು.ಯುವ ಸಾಹಿತಿ ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

Related posts

ಕಿಲ್ಲೂರು : ಹರ್ಷ ಮಟನ್, ಚಿಕನ್, ಹಾಗೂ ಫಿಶ್ ಸೆಂಟರ್ ಶುಭಾರಂಭ

Suddi Udaya

ಜ.12: ಮುಂಡಾಜೆಯಲ್ಲಿ ಸಾವಿರದ ಸಾಧಕರು ಮನೆಮನದ ಸಮ್ಮಾನ:

Suddi Udaya

ನಾಳೆ(ಮೇ25): ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ ಆಗಮನ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಉಜಿರೆ ಮೋಹನ್ ಕುಮಾರ್ ರವರಿಗೆ ‘ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿ- 2023’

Suddi Udaya

ಮಾ.13: ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ, ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಹಾಗೂ ಸಾಧನ ಸಲಕರಣೆ, ಕೃಷಿ ಸಾಧನಾ ಸಲಕರಣೆ ವಿತರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಏಳನೇ ದಿನದ ಬ್ರಹ್ಮ ಕಲಶೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!