ಬಡಗಕಾರಂದೂರು ಗ್ರಾಮದ ಎ ಒಕ್ಕೂಟದ ಎರಡು ಸ್ವಸಹಾಯ ಸಂಘಗಳ ಉದ್ಘಾಟನೆ

Suddi Udaya

ಅಳದಂಗಡಿ: ಬಡಗಕಾರಂದೂರು ಗ್ರಾಮದ ಎ ಒಕ್ಕೂಟದ ಎರಡು ಸ್ವಸಹಾಯ ಸಂಘಗಳಾದ ತೃಪ್ತಿ ಮತ್ತು ಗೆಳತಿ ತಂಡವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಮಂಜುನಾಥ ಆಚಾರ್ಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ವಲಯ ಮೇಲ್ವಿಚಾರಕಿ ಶ್ರೀಮತಿ ಸುಮಂಗಳ ರವರು ಧರ್ಮಸ್ಥಳ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಯೋಜನೆ, ಯೋಚನೆ ಯಾವ ರೀತಿ ಇದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ವೇದಿಕೆಯಲ್ಲಿ ನೂತನ ಅಧ್ಯಕ್ಷ ಹರೀಶ್ ಸಾಲ್ಯಾನ್, ಸೇವಾ ಪ್ರತಿನಿಧಿಯಾದ ಶ್ರೀಮತಿ ಶುಭ ಲತಾ ಉಪಸ್ಥಿತರಿದ್ದರು. ತೃಪ್ತಿ ತಂಡದ ಅಧ್ಯಕ್ಷರಾಗಿ ಹರೀಶ್ ರೈ, ಕಾರ್ಯದರ್ಶಿ ಅಶೋಕ್ ಭಂಡಾರಿ, ಕೋಶಾಧಿಕಾರಿ ಧೀರಜ್ ಭಂಡಾರಿ. ಗೆಳತಿ ತಂಡದ ಅಧ್ಯಕ್ಷರಾಗಿ ಶ್ರೀಮತಿ ಶುಭ ಲತಾ, ಕಾರ್ಯದರ್ಶಿ ಶ್ರೀಮತಿ ವರ್ಷ ಜೈನ್, ಕೋಶಾಧಿಕಾರಿ ಕುಮಾರಿ ಸುಪ್ರಿಯ ಆಯ್ಕೆಯಾದರು.

Leave a Comment

error: Content is protected !!