25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ: ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಚುನಾವಣಾ ಪ್ರಚಾರ ಸಭೆ

ಅಳದಂಗಡಿ: ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಚುನಾವಣಾ ಪ್ರಚಾರ ಸಭೆಯು ಎ. 17ರಂದು ಅಳದಂಗಡಿಯಲ್ಲಿ ನಡೆಯಿತು.

ನಾರಾವಿಯಿಂದ ಅಳದಂಗಡಿಯವರೆಗೆ ಬೈಕ್ ಮೆರವಣಿಗೆಯ ಮೂಲಕ ಅಭ್ಯರ್ಥಿ ಪದ್ಮರಾಜ್ ಆಗಮಿಸಿದರು.

ಖ್ಯಾತ ವಾಗ್ಮಿ ವಿವೇಕ್ ರಾಜ್ ಮೌರ್ಯ ಮಾತನಾಡಿ ಪದ್ಮರಾಜ್ ಧಣಿಕನಲ್ಲ, ರಾಜಕೀಯ ಹಿನ್ನಲೆಯಿದ್ದವರಲ್ಲ, ಪದ್ಮರಾಜ್ ಒರ್ವ ಜನಪರ ವ್ಯಕ್ತಿ, ಸಾಮಾನ್ಯ ವ್ಯಕ್ತಿ, ಬಡವರ ಮಕ್ಕಳು ಗೆಲ್ಲಬೇಕು. ಪದ್ಮರಾಜ್ ಗೆದ್ದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ವಾಣಿ ಗೆದ್ದಂತೆ, ಸಂವಿಧಾನದ ಆಶಯ ಗೆದ್ದಂತೆ ಎಂದರು.

ಸರಕಾರದ ಗ್ಯಾರಂಟಿ ಯೋಜ‌ನೆಗಳಿಂದ ಹಲವಾರು ಕುಟುಂಬಗಳು ಸಂತೋಷ ಹಾಗೂ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾರೆ. ದಕ್ಷಿಣ ಕನ್ನಡದ ಜನ ವಿದ್ಯಾವಂತರು.ಗೊತ್ತಿದೆ ಈ ಬಾರಿ ಯಾರನ್ನು ಗೆಲ್ಲಿಸಬೇಕೆಂದು. ಕಾಂಗ್ರೆಸ್ ಪಕ್ಷ ಖಂಡಿತವಾಗಿ ಗೆದ್ದೆ ಗೆಲ್ಲುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ ನಮ್ಮ ಅಭ್ಯರ್ಥಿ ಪದ್ಮರಾಜ್ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿಯವರ ಶಿಷ್ಯ. ಅವರ ಗೆಲುವು ಅದು ನಮ್ಮ ಗೆಲುವು. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಬಹುಮತದಿಂದ ಗೆಲುವನ್ನು ಸಾಧಿಸಲಿದೆ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಗಂಗಾಧರ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ಬ್ಕಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಸತೀಶ್ ಕಾಶಿಪಟ್ಣ,ನಾಗೇಶ್ ಗೌಡ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜನ್ ಜಿ.ಗೌಡ, ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್,ಕಾಂಗ್ರೆಸ್ ಮುಖಂಡರಾದ ರಾಜ್ ಶೇಖರ್ ಅಜ್ರಿ,ಸಾಹುಲ್ ಹಮೀದ್, ಧರಣೇಂದ್ರ ಕುಮಾರ್,ಶೇಖರ್ ಕುಕ್ಕೇಡಿ,ಲಕ್ಷ್ಮೀಶ, ಮೋಹನ್ ಕಲ್ಮಂಜ, ಕೇಶವ ಬೆಳಾಲ್, ಪ್ರತಿಭಾ ಕುಳಾಯಿ, ವಂದನ ಭಂಢಾರಿ, ಸುಂದರ ಗೌಡ ಇಚ್ಚಿಲ, ಹಾಗೂ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೀತಾಂಬರ ಹೆರಾಜೆ, ರಾಜು ಪೂಜಾರಿ ಕಾಶಿಪಟ್ಣ, ಯೋಗೀಶ್ ಕುಮಾರ್ ನಡಕ್ಕರ, ಭರತ್ ರಾಜ್ ರಾಜ್ ಶೇಖರ್ ರೈ,ಸುಭಾಶ್ಚಂದ್ರ ರೈ,ಪುನೀತ್ ಮಡಂತ್ಯಾರು, ಬಾಲಕೃಷ್ಣ ಕೇರಿಮಾರ್,ರವೀಂದ್ರ ಪೂಜಾರಿ ನಾರಾವಿ,ಸಂಜೀವ ಪೂಜಾರಿ ಕೊಡಂಗೆ, ಶಾಂತಲ ಗಟ್ಟಿ, ದೇವಿಪ್ರಸಾದ್ ಅರ್ವ, ಪ್ರಶಾಂತ್ ವೇಗಸ್, ಸಂತೋಷ್ ಕುಮಾರ್ ಲಾಯಿಲ,ಸಂದೀಪ್ ಅರ್ವ, ಜಯವಿಕ್ರಮ್, ಮನೋಹರ್ ಇಳಂತಿಳ, ವಿನ್ಸೆಂಟ್ ಮಡಂತ್ಯಾರು, ಪದ್ಮನಾಭ ಸಾಲಿಯಾನ್ ಮಾಲಾಡಿ, ಅರವಿಂದ್ ಜೈನ್ ಮಡಂತ್ಯಾರು,ಸತೀಶ್ ಕುಮಾರ್ ಮಿತ್ತಮಾರ್, ನಿತೇಶ್ ಕೋಟ್ಯಾನ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಮರೋಡಿ : 22 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ

Suddi Udaya

ಬೆಳ್ತಂಗಡಿ : ಲಾರಿ- ಬೈಕ್ ಅಪಘಾತದಲ್ಲಿ ಇಬ್ಬರು ಸಾವು ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಿಂದ ಲಾರಿ ಚಾಲಕನಿಗೆ ದಂಡ ಹಾಗೂ ಜೈಲು ಶಿಕ್ಷೆ ಪ್ರಕಟ

Suddi Udaya

ಕಾರ್ಕಳದಲ್ಲಿ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ವಿರುದ್ಧ ಮಾನ ಹಾನಿ:ಬಂಗೇರ ಅಭಿಮಾನಿಗಳಿಂದ ವೇಣೂರು ಪೊಲೀಸರಿಗೆ ದೂರು

Suddi Udaya

ಬಡಗಕಾರಂದೂರು ಸ.ಉ.ಹಿ.ಪ್ರಾ ಶಾಲೆಯಲ್ಲಿ ಶಾಲಾಭಿವೃದ್ಧಿ-ಮೇಲುಸ್ತುವಾರಿ ಸಮಿತಿಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

Suddi Udaya

ಗೋಪಾಲಕೃಷ್ಣ ದೇವಸ್ಥಾನ ಬೆಂದ್ರಾಳ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಆಟೋಟ ಸ್ಪರ್ಧೆ

Suddi Udaya

ಕೊಕ್ಕಡ ಶ್ರೀ ಕ್ಷೇ. ಧ.ಗ್ರಾ. ಯೋಜನೆಯ ಉಪ್ಪಾರಪಳಿಕೆ ಕಾರ್ಯಕ್ಷೇತ್ರದಲ್ಲಿ ವಿಶ್ವಜ್ಯೋತಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya
error: Content is protected !!