22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಬೆಳ್ತಂಗಡಿ ತಾಲೂಕಿನ ‘ಸಿ’ ಪ್ರವರ್ಗದ 16 ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳ ನೇಮಕ

ಬೆಳ್ತಂಗಡಿ: ವ್ಯವಸ್ಥಾಪನ ಸಮಿತಿಗಳ ಅಧಿಕಾರಾವಧಿ ಮುಗಿದಿರುವ ಬೆಳ್ತಂಗಡಿ ತಾಲೂಕಿನ ‘ಸಿ’ ಪ್ರವರ್ಗದ 16 ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.

ಕಲ್ಮಂಜ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಳಕ್ಕೆ ಮುಂಡಾಜೆಯ ಹಿರಿಯ ಪಶು ವೈದ್ಯ ಪರಿವೀಕ್ಷಕ, ಮಚ್ಚಿನ ಮಾಣೂರು ಶ್ರೀ ಧರ್ಮಶಾಸ್ತ್ರಾವು ದೇವಸ್ಥಾನಕ್ಕೆ ಮಚ್ಚಿನ ಗ್ರಾಪಂ ಪಿಡಿಒ, ಮುಂಡಾಜೆಯ ಶ್ರೀ ಮೂರ್ತಿಲ್ಲಾಯಿ ದೈವಸ್ಥಾನಕ್ಕೆ ಮುಂಡಾಜೆ ಗ್ರಾಮಕರಣಿಕ, ಇಂದಬೆಟ್ಟು ಶ್ರೀ ವೀರಭದ್ರ ದೇವಸ್ಥಾನಕ್ಕೆ ಬೆಳಾಲು ಗ್ರಾಪಂ ಕಾರ್ಯದರ್ಶಿ, ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನಕ್ಕೆ ಗರ್ಡಾಡಿ ಗ್ರಾಮಕರಣಿಕ, ಮುಂಡೂರು ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಮುಂಡೂರು ಗ್ರಾಮಕರಣಿಕ, ತೋಟತ್ತಾಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಚಾರ್ಮಾಡಿ ಗ್ರಾಪಂ ಪಿಡಿಒ, ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನಕ್ಕೆ ಮೇಲಂತಬೆಟ್ಟು ಗ್ರಾಪಂ ಕಾರ್ಯದರ್ಶಿ, ನ್ಯಾಯತರ್ಪು ಶ್ರೀ ನಾಳ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಣ್ಣೀರುಪಂತ ಗ್ರಾಪಂ ಪಿಡಿಒ, ಪುದುವೆಟ್ಟು ಶ್ರೀ ಮಿಯ್ಯಾರು ವನದುರ್ಗಾದೇವಿ ದೇವಸ್ಥಾನಕ್ಕೆ ಪುದುವೆಟ್ಟು ಗ್ರಾಮಕರಣಿಕ, ಕರಂಬಾರು ಶ್ರೀ ಕೊರ್ಲಿ ಈಶ್ವರ ದೇವಸ್ಥಾನಕ್ಕೆ ಕರಂಬಾರು ಗ್ರಾಮಕರಣಿಕ, ಇಂದಬೆಟ್ಟು ಶ್ರೀ ಬಂಗಾಡಿ ಹಾಡಿದೈವ ದೈವಸ್ಥಾನಕ್ಕೆ ಬೆಳ್ತಂಗಡಿ ಹೋಬಳಿ ಕಂದಾಯ ನಿರೀಕ್ಷಕ, ಮಿತ್ತಬಾಗಿಲು ಶ್ರೀ ಕೊಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಿತ್ತಬಾಗಿಲು ಗ್ರಾಪಂ ಪಿಡಿಒ, ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕಾಶಿಪಟ್ಣ ಗ್ರಾಪಂ ಪಿಡಿಒ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವೇಣೂರು ಗ್ರಾಮಕರಣಿಕ, ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶಿರ್ಲಾಲು ಪಿಡಿಒ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

Related posts

ಬೆಳ್ತಂಗಡಿ ಮಾತೃಶ್ರೀ ಸಿಲ್ಕ್ ನಲ್ಲಿ ಅಮೋಘ ದರಕಡಿತ ಮಾರಾಟ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಉಜಿರೆ: ದ. ಕ. ಮತ್ತು ಉಡುಪಿ ಅಂತರ್ ಜಿಲ್ಲಾ ಪಾಲಿಟೆಕ್ನಿಕ್ ಪುರುಷರ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾಟದ ಉದ್ಘಾಟನೆ

Suddi Udaya

ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಆನಂದ ಪಾದೆ ರವರಿಗೆ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿಯಿಂದ ಚಿಕಿತ್ಸಾ ನೆರವು

Suddi Udaya

ಬಳಂಜ ಬಿಜೆಪಿ ಬೂತ್ ಸಮಿತಿ‌ ಅಧ್ಯಕ್ಷರಾಗಿ ಗಣೇಶ್ ದೇವಾಡಿಗ, ಕಾರ್ಯದರ್ಶಿಯಾಗಿ ಪ್ರಕಾಶ್ ಪೂಜಾರಿ

Suddi Udaya

ಜೇಸಿಐ ವಲಯ ಸಮ್ಮೇಳನ: ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!