ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತೆ ಸಾವಿತ್ರಿ ಬಿಜೆಪಿ ಸೇರ್ಪಡೆ

Suddi Udaya

ಲಾಯಿಲ ಗ್ರಾಮದ ಬೂತ್ ಸಂಖ್ಯೆ 68 ರಲ್ಲಿ ಕಾಂಗ್ರೇಸ್ಸಿನ ಸಕ್ರೀಯ ಕಾರ್ಯಕರ್ತೆಯಾಗಿದ್ದ ಸಾವಿತ್ರಿ ಕೃಷ್ಣಪ್ಪ ಪುತ್ರಬೈಲು ರವರು ಶಾಸಕ ಹರೀಶ್ ಪೂಂಜಾರವರ ಕಳೆದ 5 ವರುಷಗಳ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ತಾಲೂಕು ಎಸಿ ಮೋರ್ಚಾದ ನೂತನ ಅಧ್ಯಕ್ಷ ಹಿರಿಯರಾದ ಈಶ್ವರ ಬೈರ ಹಾಗೂ ಬೂತ್ 68 ರ ನೂತನ ಅಧ್ಯಕ್ಷ ಮಧುಸೂಧನ್ ರವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.

ಪಕ್ಷದ ಶಾಲು ಹಾಗೂ ಧ್ವಜವನ್ನು ನೀಡುವ ಮೂಲಕ ಈಶ್ವರ ಭೈರ ಹಾಗೂ ಬೂತ್ ಅಧ್ಯಕ್ಷ ಮಧುಸೂಧನ್ ಸಾವಿತ್ರಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.


ಈ ಸಂದರ್ಭದಲ್ಲಿ ಬೂತ್ 68ರ ಕಾರ್ಯದರ್ಶಿಯಾದ ಹರಿಕೃಷ್ಣ ಪುತ್ರಬೈಲು, ಬೂತ್ ಸಮಿತಿ ಸದಸ್ಯರಾದ ರಾಜೇಂದ್ರ ಗಾಂಧಿನಗರ, ಹಾಗೂ ತಾ.ಪಂ ಮಾಜಿ ಸದಸ್ಯರಾದ ಸುಧಾಕರ್ ಬಿ.ಎಲ್, ಹಾಗೂ ಕೃಷ್ಣಪ್ಪ ಬೈರ ಉಪಸ್ಥಿತರಿದ್ದರು.

Leave a Comment

error: Content is protected !!