ಜಾರಿಗೆಬೈಲು-ಮಚ್ಚಿನ ರಸ್ತೆ ಕಾಮಗಾರಿ ಸ್ಥಗಿತ: ಗ್ರಾಮಸ್ಥರಿಂದ ರಸ್ತೆ ತಡೆ

Suddi Udaya

ಬೆಳ್ತಂಗಡಿ : ನ್ಯಾಯತರ್ಪು ಬಳಿಯ ಜಾರಿಗೆಬೈಲು- ಮಚ್ಚಿನ ಕೂಡು ರಸ್ತೆ ಕಾಮಗಾರಿ ಅಮೆಗತಿಯಲ್ಲಿ ನಡೆಯುತ್ತಿತ್ತು. ರಸ್ತೆ ಕಾಮಗಾರಿ ಪೂರ್ಣಗೊಳಿಸದೆ, ಅಂದಾಜು 150 ಮೀಟರ್ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರರು ಬೇರೆ ಕಡೆಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ನಿರ್ಧರಿಸಿ ಸಾಮಾಗ್ರಿಗಳನ್ನು ಟ್ರಕ್ ಗೆ ತುಂಬಿಸುವುದನ್ನು ಗಮನಿಸಿದ ಸ್ಥಳೀಯರು ಬೆಳಿಗ್ಗೆ 6 ಗಂಟೆಗೆ ಸೇರಿದಂತೆ ರಸ್ತೆ ಅಡ್ಡಲಾಗಿ ಘನ ವಾಹನಗಳನ್ನು ನಿಲ್ಲಿಸಿ ರಸ್ತೆ ತಡೆ ಮಾಡಿದರು.


ಸುಮಾರು 60 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

Leave a Comment

error: Content is protected !!