ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಮತ ಪ್ರಚಾರ

Suddi Udaya

ಬೆಳ್ತಂಗಡಿ : ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬಿರುಸಿನ ಮತಯಾಚನೆ ನಡೆಯಿತು.
ಲೋಕಸಭಾ ಚುನಾವಣೆ-2024 ರಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರಿಗೆ ಮತದಾರರು ಮತ ನೀಡುವಂತೆ ಮನವಿ ಮಾಡಿಕೊಂಡರು.


ಸೌಹಾರ್ದ ತುಳುನಾಡು ಸಮಗ್ರ ಅಭಿವೃದ್ಧಿಗಾಗಿ, ಸ್ವಾಭಿಮಾನಕ್ಕಾಗಿ ,ಸಮಾನತೆಗಾಗಿ, ಸೌಹಾರ್ದತೆಗಾಗಿ ಸಂದರ ನಾಳೆಗಾಗಿ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸುವಂತೆ ಮತದಾರರ ಮನೆ ಮನೆಗೆ ಕಾರ್ಯಕರ್ತರು ಭೇಟಿ ನೀಡಿ ಮತಯಾಚನೆ ಭರದಿಂದ ಸಾಗುತ್ತಿದೆ.


ಕಳಿಯ ಗ್ರಾಮ ಪಂಚಾಯತ್ ಸದಸ್ಯೆ, ಕೊಯ್ಯೂರು ಗ್ರಾಮದ ಚುನಾವಣಾ ಉಸ್ತುವಾರಿ ಮರೀಟಾ ಪಿಂಟೋ, ಕಳಿಯ ಗ್ರಾಮದ ಪಂಚಾಯತ್ ಸದಸ್ಯೆ ಶ್ವೇತಾ ಶ್ರೀನಿವಾಸ್, ಕಳಿಯ ಬೂತು ಸಂಖ್ಯೆ 150 ಕಾರ್ಯದರ್ಶಿ ಸಿದ್ಧೀಕ್ ಎ, ಪಕ್ಷದ ಪ್ರಮುಖ ಕಾರ್ಯಕರ್ತರು ಕಾರ್ಯಕರ್ತರು ಭಾಗವಹಿಸಿದ್ದರು.

Leave a Comment

error: Content is protected !!