ಕಲ್ಲುಂಜ ಪ್ರಗತಿಪರ ಕೃಷಿಕ, ನಾಟಿ ವೈದ್ಯ ಅಣ್ಣಿ ಶೆಟ್ಟಿ ನಿಧನ

Suddi Udaya


ಬೆಳ್ತಂಗಡಿ : ಎ.21. ಓಡಿಲ್ನಾಳ ಗ್ರಾಮದ ಕುಲ್ಲುಂಜ ಮನೆ ಪ್ರಗತಿಪರ ಕೃಷಿಕ,ನಾಟಿ ವೈದ್ಯ ಅಣ್ಣಿ ಶೆಟ್ಟಿ ( 81 ವರ್ಷ) ವಯೋಸಹಜ ಅನಾರೋಗ್ಯದಿಂದ ಎ.21 ರಂದು ಸ್ವಗ್ರಹದಲ್ಲಿ ನಿಧನರಾದರು.

ಮೃತರು 5 ಹೆಣ್ಣು, 2 ಗಂಡು ಮಕ್ಕಳು ಹಾಗೂ ಸೊಸೆಯಂದಿರು,ಆಳಿಯಂದಿರೂ,ಮೊಮ್ಮಕ್ಕಳು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.

ಇವರು ವಿಷ ಜಂತು, ಜಾನುವಾರು ಮತ್ತು ಮನುಷ್ಯನ ಶರೀರದ ವಿವಿಧ ಖಾಯಿಲೆಗೆ ಗುಣಪಡಿಸುವುದರಲ್ಲಿ ಎತ್ತಿದ ಕೈ ಎಂದು ಸ್ಥಳೀಯರು ಹೇಳುತ್ತಾರೆ.

Leave a Comment

error: Content is protected !!