ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya

ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಎ.21ರಂದು ಮಹಾವೀರ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

 ಜಿನ ಬಾಲಕನನ್ನು ಮೆರವಣಿಗೆಯಲ್ಲಿ ಚಂದ್ರ ಶಾಲೆಗೆ ಕರೆತಂದು ಪುಟಾಣಿ ಮಕ್ಕಳಿಂದ  ಜನ್ಮಾಭಿಷೇಕ , ಅಷ್ಟವಿದಾರ್ಚನೆ ,  ಗೀತಾ – ನೃತ್ಯ ನೆರವೇರಿತು.  ಮಹಾವೀರ ಸ್ವಾಮಿಯ ನಾಮಕರಣ ಮಹೋತ್ಸವವನ್ನು  ಮಾತೃಶ್ರೀ. ಹೇಮಾವತಿ ಅಮ್ಮನವರು ಮತ್ತು ಕುಟುಂಬದ ಸದಸ್ಯರ ಮಾರ್ಗದರ್ಶನದಲ್ಲಿ  ಊರಿನ ಶ್ರಾವಕ ಶ್ರಾವಕಿಯರು ನೆರವೇರಿಸಿದರು.

Leave a Comment

error: Content is protected !!