ಕಳಿಯ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ

Suddi Udaya

ಬೆಳ್ತಂಗಡಿ : ಕಳಿಯ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ ನಡೆಯಿತು.

ಲೋಕಸಭಾ ಚುನಾವಣೆ-2024 ರಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪಕ್ಷಕ್ಕೆ ಮತ ನೀಡುವ, ಸಮಾಜ ಮುಖಿಚಿಂತನೆ, ಸಮರ್ಪಕ ಯೋಜನೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣ ಎಂಬ ಧೈಯದ ಮೂಲಕ ಮತ್ತೊಮ್ಮೆ ಮೋದಿ ಸರಕಾರವನ್ನು ಬೆಂಬಲಿಸುವಂತೆ ಹಾಗೂ ಬ್ರಿಜೇಶ್ ಚೌಟರನ್ನು ಗೆಲ್ಲಿಸಿ ಕೊಡುವಂತೆ ಮತದಾರರ ಮನೆ ಮನೆಗೆ ಶಾಸಕ ಹರೀಶ್ ಪೂಂಜಾ 151 ಬೂತ್ ನ ಅಧ್ಯಕ್ಷರಾದ ಯಶೋದರ ಶೆಟ್ಟಿ ಮಾಣಿಕ್ಯ. ಕಾರ್ಯದರ್ಶಿ ಗಣೇಶ್. ಕುವೆಟ್ಟು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ದಾಜೆ, ಕಳಿಯ ಶಕ್ತಿ ಕೇಂದ್ರದ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಳಿಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಸದಸ್ಯರಾದ ಸುಧಾಕರ ಮಜಲು, ಕುಸುಮ, ಕಾರ್ಯಕರ್ತರು ಭೇಟಿ ನೀಡಿ ಮತಯಾಚನೆ ಮಾಡಿದರು.

Leave a Comment

error: Content is protected !!