ಬೆಳ್ತಂಗಡಿ : ಗೇರುಕಟ್ಟೆ ಕಳಿಯ ಗ್ರಾಮದ ಮೆಗಿನ ಗುತ್ತು ಕುಳಾಯಿ ಜಗನ್ನಾಥ ಶೆಟ್ಟಿ ಹಾಗೂ ಸಹೋದರ, ಸಹೋದರಿಯವರ ವತಿಯಿಂದ ಮನೆಯಲ್ಲಿ ಇತ್ತೀಚಿಗೆ ಶ್ರೀ ಮಹಮ್ಮಾಯಿ ಅಮ್ಮನವರ ಗೋಂದಲ ಪೂಜೆ ವಿಜೃಂಭಣೆಯಿಂದ ಜರುಗಿತು.

ದೇವರಿಗೆ ಪಾತ್ರಿಗಳಿಂದ ದರ್ಶನ ಸೇವೆ, ವಿಶೇಷ ಮಹಾ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯಿತು.
ಸ್ಥಳೀಯವಾದ ಸುಂದರ ನಾಯ್ಕ ನೇತೃತ್ವದಲ್ಲಿ ಮರಾಠಿ ಸಮಾಜದವರು ಕುಣಿತ ಭಜನೆಯ ಮೂಲಕ ದೇವರ ನಾಮವನ್ನು ಪರಿಚಯಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.











