September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ: ಶಿವಕೀರ್ತಿ ನಿಲಯದಲ್ಲಿ‌ “ಹನುಮ‌ ಜಯಂತಿ” ಆಚರಣೆ

ಶಿಶಿಲ : ರಾಮ ಹನುಮ ಈ ಭೂಮಿಯಲ್ಲಿ ಚಿರಕಾಲ ಇದ್ದಾರೆ. ಎಲ್ಲಿ ಭಕ್ತಿಯಿಂದ ಭಜಿಸುವವರಿರುತ್ತಾರೊ ಅಲ್ಲಿ ರಾಮ ಹನುಮನಿರುತ್ತಾರೆ. ಭಜನೆ ಸಂಸ್ಕಾರ ಬೆಳೆಸುತ್ತದೆ. ಅಳುಕನ್ನು ದೂರ ಮಾಡುತ್ತದೆ. ನಮ್ಮ ಧರ್ಮ ನಂಬಿಕೆ ಇರುವಲ್ಲಿ ಹನುಮ ರಾಮನಿರುತ್ತಾರೆ. ನಾವು ಇರುವಲ್ಲಿಯವರೆಗೆ ಅವರೂ ಇರುತ್ತಾರೆ. ಅವರು ಇರುವಲ್ಲಿಯವರೆಗೆ ನಾವೂ ಇರುತ್ತೆವೆ. ಎಂದು ಸಾಹಿತಿ, ಬರಹಗಾರ, ನಿವೃತ್ತ ಪ್ರಾಂಶುಪಾಲರಾದ ಉಂಡೆಮನೆ ವಿಶ್ವೇಶ್ವರ ಭಟ್ ತಿಳಿಸಿದರು.


ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ‌ ನಡೆದ ” ಹನುಮ‌ ಜಯಂತಿ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಕಾರ್ಯಕ್ರಮವನ್ನು ಅರಿಕೆಗುಡ್ದೆ ದೇವಾಲಯದ ಪ್ರಕಾಶ್ ಪಿಲಿಕಬೆ ಉದ್ಘಾಟನೆ ಮಾಡಿ ಹನೂಮಂತ ರಾಮಾಯಣದ ರತ್ನ, ಭಕ್ತಿಗೆ ಮತ್ತು ಆದರ್ಶಕ್ಕೆ ಹನುಮ ನಮಗೆಲ್ಲಾ ಮಾದರಿ . ಹನುಮನ ಭಜಿಸಿದವರಿಗೆ ಎಲ್ಲಾ ಪುಣ್ಯ ಕಾರ್ಯಗಳೂ ಜೀವನದಲ್ಲಿ ಲಭಿಸಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯಿಂದ ಕುಣಿತ ಭಜನೆ, ಭಜನಾ ಪಟುಗಳಿಗೆ ಅಭಿನಂದನೆ, ರಾಮಾಯಣ ಹಕ್ಕಿ ನೋಟ ಪುಸ್ತಕ ವಿತರಣೆ ಮುಂತಾದ ಕಾರ್ಯಕ್ರಮ ಜರಗಿತ್ತು.
ಭಜನಾ ಕಾರ್ಯಕ್ರಮವನ್ನು ಸುಂದರ ಬಿಳಿನೆಲೆ ಮತ್ತು ತಂಡದವರು ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಗ್ಗ, ಉದಯಶಂಕರ ಅರಸಿನಮಕ್ಕಿ, ಪುತ್ತೂರು ರವೀಂದ್ರ ಕುದ್ದಣ್ನಾಯ, ಭಾಸ್ಕರ ರಾವ್ ಮುಂಡ್ರುಪ್ಪಾಡಿ , ರವಿ ಕಾಸರಗೋಡು, ವಿಶು ಕುಮಾರ್ ಪೆರೆಡೆಲು, ಪ್ರೇಮಚಂದ್ರ ಪೆರ್ಲ, ಮೋಹನ ನೆಲ್ಲಿತ್ತಾಯ, ಶಿವರಾಮ ನೆಲ್ಲಿತ್ತಾಯ, ಶ್ರೀಪತಿ ಶಿಶಿಲ, ಪ್ರಕಾಶ ನೆಲ್ಲಿತ್ತಾಯ ಮುಂತಾದವರು ಭಾಗವಹಿಸಿದ್ದರು.

Related posts

ಕಡಿರುದ್ಯಾವರದಲ್ಲಿ ಗ್ರಾಮ ಒನ್ ನಾಗರಿಕ‌ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಬೆಳ್ತಂಗಡಿ: ಪ.ಜಾತಿ.ಪ.ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಜಿ. ಅಧ್ಯಕ್ಷತೆಯಲ್ಲಿ ಕುಂದುಕೊರತೆ ಮತ್ತು ಪ್ರಗತಿ ಪರಿಶೀಲನಾ ಸಭೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಸಹಕಾರ ಸಪ್ತಾಹ ಕಾರ್ಯಕ್ರಮ: ಆರಂಬೋಡಿಯ ಪ್ರತಾಪ್ ಶೆಟ್ಟಿಯವರಿಗೆ ಹೈನುಗಾರಿಕೆ ಕ್ಷೇತ್ರದಲ್ಲಿ “ಕ್ಷೀರಾರತ್ನ” ಪ್ರಶಸ್ತಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕುಟುಂಬ ಸಮೇತರಾಗಿ ಭೇಟಿ

Suddi Udaya

ಮೇ 4: ವಿದ್ಯುತ್ ನಿಲುಗಡೆ

Suddi Udaya
error: Content is protected !!