September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ : ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾವಣೆ

ಬೆಳ್ತಂಗಡಿ; ಚುನಾವಣಾ ಆಯೋಗ ಸರಕಾರ ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ನೀಡಿದೆ ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೆಳ್ತಂಗಡಿ ನಗರದಲ್ಲಿ ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕಾಗಿ ಬಂತು.


ಬೆಳ್ತಂಗಡಿ ನಗರದ ನಿವಾಸಿ ಬಿ.ಎ ಮೊಹಮ್ಮದ್ ಅವರು ಎಂಡೋ ಸಲ್ಫಾನ್ ಸಂತ್ರಸ್ತರು, ಎದ್ದು ನಡೆಯಲು ಶಕ್ತಿಯಿಲ್ಲದ 30ವರ್ಷ ಪ್ರಾಯದ ಇವರು ಚಾಪೆಹಿಡಿದು ಮಲಗಿದ್ದಲ್ಲಿಯೇ ಇದ್ದಾರೆ. ಹಿಂದೆಲ್ಲ ಇವರನ್ನು ಅವರ ತಂದೆಯೇವರೇ ಎತ್ತಿಕೊಂಡು ಹೋಗಿ ಮತಚಲಾಯಿಸುತ್ತಿದ್ದರು. ಅವರಿಗೆ ಒಂದೂವರೆ ವರ್ಷದ ಹಿಂದೆ ನಡೆದ ಅಪಘಾತದ ಬಳಿಕ ಅವರಿಗೇ ನಡೆಯಲು ಕಷ್ಟವಾಗಿದೆ. ಎಂಡೋ ಪೀಡಿತರಾಗಿರುವ ಇವರ ಹೆಸರನ್ನು ವಿಕಲಚೇತನರ ಪಟ್ಟಿಯಲ್ಲಿ ಸೇರಿಸಿ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಪಟ್ಟಣ ಪಂಚಾಯತಿನ ವಿಕಲಚೇತನರ ಪುನರ್ವಸತಿ ವಿಭಾಗದಿಂದ ಕಂದಾಯ ಇಲಾಖೆಗೆ ಪಟ್ಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸಿಲ್ಲ. ಆ ಕಾರಣಕ್ಕಾಗಿ ಈ ಬಾರಿಯ ಚುನಾವಣೆಯಲ್ಲೂ ಅವರ ಹೆಸರು ವಿಕಲಚೇತನ ಮತದಾದರರ ಪಟ್ಟಿಯಲ್ಲಿ(ಪಿಡಬ್ಕ್ಯುಡಿ) ನಾಪತ್ತೆಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯತಿನಲ್ಲಿ ವಿಚಾರಿಸಿದರೆ ನಾವು ಕಳುಹಿಸಿದ್ದೇವೆ ಆದರೆ ಎಂಟ್ರಿ ಆಗಿಲ್ಲ ಎಂಬ ಉತ್ತರ ಬರುತ್ತಿದೆ.
ಇಂದು ಬಿ.ಎ.ಮೊಹಮ್ಮದ್ ಅವರನ್ನು ಅವರ ಸಂಬಂಧಿಕರೇ ಎತ್ತಿಕೊಂಡು ಬೆಳ್ತಂಗಡಿ ಮಾದರಿ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ವಿಕಲ ಚೇತನರಾಗಿರುವ ಇವರು ತಮ್ಮ ಮತದಾನದ ಹಕ್ಕನ್ನು ಸಮರ್ಪಕ ವಾಗಿ ಚಲಾಯಿಸಿದ್ದಾರೆ.

Related posts

ಅಜ್ಮೀರ್ ಖಾಜಾ ಸಂಸ್ಮರಣೆ; ಸರ್ವಧರ್ಮೀಯ ಐದು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

Suddi Udaya

ಮಾಣೂರು ಸಪರಿವಾರ ಶ್ರೀ ಶಾಸ್ತರ ದೇವಸ್ಥಾನ ನೂತನ ದೇವಾಲಯದ ಶಿಲಾನ್ಯಾಸ

Suddi Udaya

ರಸ್ತೆಯಲ್ಲೇ ಹರಿದ ಮಳೆ ನೀರು: ಶಾಸಕ ಹರೀಶ್ ಪೂಂಜರಿಂದ ತುರ್ತು ಸ್ಪಂದನೆ , ಚರಂಡಿ ದುರಸ್ತಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಪಂಚಾಯತ್ ಕಾಮಗಾರಿಗಳನ್ನು ನಡೆಸಲು ಇಂಜಿನಿಯರ್ ಗಳ ಕೊರತೆ: ಕೂಡಲೇ ಸರಕಾರ ಕ್ರಮ ಜರುಗಿಸುವಂತೆ ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಗೌಡ ಒತ್ತಾಯ

Suddi Udaya

ಕೆಎಸ್‌ಆರ್‌ಟಿಸಿ ಧರ್ಮಸ್ಥಳ -ಮಂಗಳೂರು ನಡುವೆ ನಾಲ್ಕು ‘ಸೂಪರ್‌ಫಾಸ್ಟ್’ – ಬಸ್ಸು ಸಂಚಾರ ಪ್ರಾರಂಭ

Suddi Udaya
error: Content is protected !!